NEWSದೇಶ-ವಿದೇಶನಮ್ಮಜಿಲ್ಲೆ

ಈಗಲೂ ಸಾರಿಗೆ ನೌಕರರ ದಿಕ್ಕು ತಪ್ಪಿಸುತ್ತಿರುವ ಕೆಲ ಸಂಘಟನೆಗಳು : ನೌಕರರ ಪರ ಸಂಘಟನೆ ಬಗ್ಗೆ ತಪ್ಪು ಮಾಹಿತಿ ನೀಡುವ ಯತ್ನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರು 2020 ಮತ್ತು 2021ರಲ್ಲಿ ಸುಮಾರು 24 ದಿನಗಳ ಕಾಲ ಮುಷ್ಕರ ಮಾಡಿದರು. ಕಾರಣ ಎಲ್ಲರಿಗೂ‌ ತಿಳಿದಿರುವ ಹಾಗೆ ಸರ್ಕಾರಿ ನೌಕರರಿಗೂ ಹಾಗೂ ಸಾರಿಗೆ ಸಂಸ್ಥೆ ನೌಕರರಿಗೂ ಇರುವ ಸಂಬಳದ ವ್ಯತ್ಯಾಸ ‌ಎಂದು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇದು ಶಾಶ್ವತವಾಗಿ ನಿವಾರಣೆ ಆಗಬೇಕು ಎಂದು ನೌಕರರ ಕೂಟ ಎರಡು ಬಾರಿ ಮುಷ್ಕರ ಹೂಡಿತು. ಆದರೆ ಅವರ ಬೇಡಿಕೆ ಬೇಡಿಕೆಯಾಗಿಯೇ ಈಗಲೂ ಉಳಿಯದೇ. ಹೀಗಾಗಿ ಪರೋಕ್ಷವಾಗಿ ಸಾರಿಗೆ ಅಧಿಕಾರಿಗಳಿಗೆ, ಪ್ರತ್ಯಕ್ಷವಾಗಿ ಹೋರಾಟ ಮಾಡಿದ ನೌಕರ ವರ್ಗಕ್ಕೆ ಇನ್ನೂ ಏನೂ ದಕ್ಕಿಲ್ಲ. ಬದಲಾಗಿ ನೌಕರರಿಗೆ ಮಾತ್ರ ಅನೇಕ ಶಿಕ್ಷೆಗಳನ್ನು ನೀಡಲಾಗಿದೆ.

ಎರಡು ಬಾರಿ ಯಶಸ್ವಿ ಮುಷ್ಕರ ಮಾಡಿದರೂ ಸಹ ನೌಕರ ವರ್ಗಕ್ಕೆ ಎಳ್ಳಷ್ಟು ಅನುಕೂಲವಾಗಲಿಲ್ಲ. ಬದಲಿಗೆ ಒತ್ತಡ, ಹಿಂಸೆಗಳು ಮತ್ತಷ್ಟು ಈ ವರ್ಗ ಅನುಭವಿಸುವಂತಾಯಿತು. ಹಲವು ಸಾವು-ನೋವುಗಳಂತಹ ಘಟನೆಗಳು ನಡೆದವು.

ಹಾಗಾದರೆ ಮುಷ್ಕರ ಯಶಸ್ವಿಯಾದರೂ ಸಹ ಫಲ ಏಕೆ ದೊರೆಯಲಿಲ್ಲ ಎಂದು ಕಾರಣ ಹುಡುಕುತ್ತಾ ಹೋದರೆ ಮುಂಚೂಣಿ ವಹಿಸಿದವರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವಿದ್ದರಾ ಎಂಬ ಪ್ರಶ್ನೆ ಮೂಡುತ್ತಿದೆ. ನಾನೇ ನನ್ನಿಂದಲೇ ಎಂಬ ಹಮ್ಮಿನಿಂದ ಈರೀತಿ ಆಗಿದೆಯೇ ಎಂದು ನೌಕರರಲ್ಲೇ ಗೊಂದವಿದೆ. ಈ ಗೊಂದಲ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತಿವೆ ಕೆಲ ಸಂಘಟನೆಗಳು.

2021ರಲ್ಲಿ ನಡೆದ ಮುಷ್ಕರದ ಮುಂದಾಳತ್ವ ವಹಿಸಿದ್ದವರಿಗೆ ಸರಿಯಾದ ಕಾನೂನಿನ ತಿಳಿವಳಿಕೆ ಇಲ್ಲ. ಜತೆಗೆ ಅನ್ಯ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದ್ದರಿಂದ ಮುಷ್ಕರ ಫಲಕೊಡುವ ಬದಲಿಗೆ ವೈಫಲ್ಯದ ಹಾದಿ ಹಿಡಿಯಿತು ಎಂದು ಬೊಬ್ಬೆ ಹೊಡೆಯುತ್ತಿವೆ ಕೆಲ ಸಂಘಟನೆಗಳು. ಆದರೆ ಇಲ್ಲಿ ಸತ್ಯವನ್ನು ಮಾರಮಾಚುವ ಯತ್ನವು ನಡೆದಿದೆ. ಕಾರಣ ಎಲ್ಲ ಸಂಘಟನೆಗಳ ಮುಖಂಡರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿ ಬೇಡಿಕೊಂಡಿರುವ ಬಗ್ಗೆ ಮಾಹಿತಿಯೂ ಇದೆ. ಆದರೆ ಈಗ ಏಕೆ ಈ ರೀತಿ ಸುಳ್ಳು ಹೇಳಿ ದಾರಿಸುತ್ತಿದ್ದಾರೆ? ಗೊತ್ತಿಲ್ಲ.

ಇನ್ನು ಶತಮೂರ್ಖರ ರೀತಿ ಮಾತನಾಡುತ್ತಿರುವ ಕೆಲ ಸಂಘಟನೆಗಳ ಬಾಲಂಗೋಷಿಗಳು ಮುಷ್ಕರದ ವೇಳೆ ಸರ್ಕಾರ ಮಾತುಕತೆಗೆ ಕರೆದರೂ ಹೋಗದೆ ಸಂದಾನ ಪ್ರಕ್ರಿಯೆಯ ಬಾಗಿಲನ್ನು ಸ್ವಯಂ ಮುಚ್ಚಿಕೊಂಡಿದ್ದರು ಎಂದು ಹೇಳುತ್ತಿದ್ದಾರೆ. ಆದರೆ ಅಂದಿನ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು ಮಾತುಕತೆಗೆ ಬನ್ನಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದರು ಅಷ್ಟ, ಎಲ್ಲಿಗೆ ಬರಬೇಕು ಎಷ್ಟು ಗಂಟೆಗೆ ಬರಬೇಕು ಎಂಬುದನ್ನು ಹೇಳಿದ್ದರಾ? ಅಥವಾ ಮುಷ್ಕರ ನಿರತ ಮುಖಂಡರನ್ನು ಭೇಟಿ ಮಾಡಲು ಸರ್ಕಾರದ ಪ್ರತಿನಿಧಿಯಾಗಿ ಯಾವ ಅಧಿಕಾರಿಯಾದರೂ ಬಂದಿದ್ದರಾ? ಇಲ್ಲ. ಆದರೂ ಏಕೆ ಗೂಬೆಕೂರಿಸುವ ಕೆಲಸ ಮಾಡುತ್ತಿದ್ದಾರೆ ಈ ಬಾಲಂಗೋಷಿಗಳು ಗೊತ್ತಿಲ್ಲ.

2021ರಲ್ಲಿ ನಡೆದ ಮುಷ್ಕರಕ್ಕೆ ನೌಕರ ವರ್ಗದ ಅಪಾರ ಬೆಂಬಲಕ್ಕೆ ಕಾರಣವೇನು?? ಶಾಶ್ವತ ಪರಿಹಾರ!!. ನಮ್ಮನ್ನೂ ಸರ್ಕಾರಿ ನೌಕರರೆಂದು ಮಾಡಿ ಎಂಬ ಬೇಡಿಕೆ ಸಫಲವಾದರೆ ನಾವು ನೆಮ್ಮದಿಯಿಂದ ಜೀವನ ಮಾಡಬಹುದು ಎಂಬ ಮನದಾಸೆ. ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಈ ಕೆಲ ಸಂಘಟನೆಗಳ ಪ್ರಮುಖರೆನಿಸಿಕೊಂಡವರೆ ಸರ್ಕಾರದ ಕಿವಿ ಹಿಂಡಿ ನೌಕರರಿಗೆ ಸೌಲಭ್ಯ ಒದಗಿಸಿಕೊಡಿ ಎಂದು ಹೇಳುವ ಬದಲಿಗೆ ನೌಕರರ ತುಳಿದಾಳುವುದು ಹೇಗೆ ಎಂದು ಹೇಳಿಕೊಟ್ಟು ಮುಷ್ಕರದಲ್ಲಿ ಭಾಗಿಯಾಗದವರನ್ನು ವಜಾ ಮಾಡಿಸಿ ಒಂದು ರೀತಿ ವಿಕೃತಿ ಮೆರೆದು ಕೇಕೆಹಾಕಿದರು.

ಈ ಸಮಯದಲ್ಲಿ ಸಂಬಳದ ವ್ಯತ್ಯಾಸದ ಹಲವಾರು ಚಾರ್ಟ್‌ಗಳನ್ನು ಚಂದ್ರು ಬಿಡುಗಡೆ ಮಾಡಿದರು. ಆದರೆ ಅವು ಬಹಳಷ್ಟು ತಪ್ಪು ಮಾಹಿತಿ ಇವೇ ಎಂದು ಆ ಕೆಲ ಸಂಘಟನೆಗಳ ಪದಾಧಿಕಾರಿಗಳು ಈಗಲೂ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ಅವರಿಗೆ ಏನು ಲಾಭ ಎಂಬುವುದು ತಿಳಿಯುತ್ತಿಲ್ಲ. ನೌಕರರಿಗೆ ಸೌಲಭ್ಯಕೊಡಿಸಬೇಕಾದವರೆ ಈ ರೀತಿ ದಿಕ್ಕು ತಪ್ಪಿಸುವ ಕೆಲಸ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ.

ಒಟ್ಟಿನಲ್ಲಿ ಒಂದು ಕಾಲಘಟದವರೆಗೂ ತಕ್ಕ ಮಟ್ಟಿಗೆ ಗೌರವಯುತ ಜೀವನ ಸಾಗಿಸುತ್ತಿದ್ದ ಈ ಸಾರಿಗೆ ನೌಕರರನ್ನು ಈ ಮುಷ್ಕರದ ಬಳಿಕ ಕೆಲಸಂಘಟನೆಗಳ ಮುಖಂಡರು ಮತ್ತು ಅವರ ಬಾಲಂಘೋಷಿಗಳು ಸರ್ಕಾರ ಮತ್ತು ಅಧಿಕಾರಿಗಳ ದಾರಿ ತಪ್ಪಿಸಿ ಹಲವಾರು ಶಿಕ್ಷೆಗಳನ್ನು ಕೊಡಿಸುವ ಮೂಲಕ ಸಮಾಜದಲ್ಲಿದ್ದ ಗೌರವವನ್ನು ಕಳೆದುಕೊಳ್ಳುವಂತೆ ಮಾಡಿದ್ದಾರೆ. ಈಗಲೂ ಅಲ್ಲಲ್ಲಿ ಮಾಡುತ್ತಲೇ ಇದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆಯಲ್ಲಿ ಬದಲಾವಣೆ ಇಲ್ಲ. ಹೀಗಾಗಿ ನಾವು ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುವವರೆಗೂ ನಮ್ಮ ಹೋರಟ ನಿರಂತರವಾಗಿರುತ್ತದೆ ಎಂದು ಕೂಟ ಅಧ್ಯಕ್ಷ ಚಂದ್ರಶೇಖರ್‌ ಹೇಳಿದ್ದಾರೆ.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ