CrimeNEWSನಮ್ಮರಾಜ್ಯ

KSRTC ರಾಮನಗರ ಬಸ್‌ ನಿಲ್ದಾಣದ ಎಟಿಎಂನಲ್ಲಿ 500 ಬದಲಿಗೆ 20 ರೂ. ನೋಟು!

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋದ ಯುವತಿ ಫುಲ್ ಶಾಕ್ ಆದ ಘಟನೆ ರಾಮನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ನಿಲ್ದಾಣದಲ್ಲಿ ನಡೆದಿದೆ.

ಹೌದು! ಎಟಿಎಂನಲ್ಲಿ 500 ರೂಪಾಯಿ ನೋಟಿನ ಬದಲಿಗೆ 20 ರೂಪಾಯಿಯ ನೋಟುಗಳು ಡ್ರಾ ಆಗಿವೆ. 500 ರೂಪಾಯಿ ನೋಟಿನ ಮಧ್ಯೆ 20 ರೂಪಾಯಿ ನೋಟುಗಳನ್ನು ನೋಡಿ ಯುವತಿ ಶಾಕ್‌ಗೆ ಒಳಗಾಗಿದ್ದಾರೆ.

ಬಸ್ ನಿಲ್ದಾಣದಲ್ಲಿರುವ ಇಂಡಿಯಾ 1 ಎಟಿಎಂಗೆ ಹೋದ ಯುವತಿ 5 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಈ ವೇಳೆ ATMನಲ್ಲಿ 4 ಸಾವಿರ ರೂಪಾಯಿವರೆಗೆ 500 ನೋಟುಗಳು ಬಂದಿದೆ. ಉಳಿದ 1 ಸಾವಿರಕ್ಕೆ 500 ರೂ. ನೋಟಿನ ಬದಲಿಗೆ 20 ರೂ.ಗಳ ಎರಡು ನೋಟುಗಳು ಬಂದಿವೆ.

ನಾಲ್ಕು ಸಾವಿರ ಹಣದ ಜೊತೆಗೆ ಉಳಿದ 1 ಸಾವಿರ ರೂಪಾಯಿಗೆ ಕೇವಲ ಎರಡು 20 ರೂಪಾಯಿ ಮುಖಬೆಲೆಯ ನೋಟುಗಳು ಬಂದಿದ್ದು, 5000 ರೂಪಾಯಿ ಬದಲಿಗೆ 4040 ರೂಪಾಯಿ ಡ್ರಾ ಆಗಿದೆ. 500ರ ಬದಲಿಗೆ 20 ರೂ. ನೋಟ್ ನೋಡಿ ಉಳಿದ ಗ್ರಾಕರೂ ಕೂಡ ಶಾಕ್ ಆಗಿದ್ದಾರೆ.

ಎಟಿಎಂನಲ್ಲಿ ಈ ಯಡವಟ್ಟು ಆದ ಬಳಿಕ ಸಾರ್ವಜನಿಕರು ತಮ್ಮ ಎದುರಿನಲ್ಲೇ ATM ಬಾಕ್ಸ್ ಓಪನ್ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಹಣ ಸರಿಪಡಿಸುವಂತೆ ಎಟಿಎಂ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಆ ಬಳಿಕ ATM ಸಿಬ್ಬಂದಿಗಳು ಆಗಿರುವ ಪ್ರಾಮಾದಕ್ಕೆ ಕ್ಷಮೆ ಕೇಳಿ ಇನ್ನು 960 ರೂಪಾಯಿಯನ್ನು ವಾಪಸ್ ಮಾಡುವುದಾಗಿ ಹೇಳಿದ ಬಳಿಕ ಸಾರ್ವಜನಿಕರು ಸುಮ್ಮನಾಗಿದ್ದಾರೆ. ಎಟಿಎಂಗೆ ಹೋದಾಗ ಹಣ ಸರಿ ಇದೆಯೇ ಎಂದು ಎಟಿಎಂ ಒಳಗೆ ಲೆಕ್ಕ ಮಾಡಿದರೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನಿಮಗೆ ಒಂದು ವೇಳೆ ಮೋಸವಾಗಿದ್ದರೆ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಹೀಗಿ ಒಂದು ಬಾರಿ ಡ್ರಾ ಮಾಡಿಕೊಂಡ ಹಣವನ್ನು ಪರಿಶೀಲಿಸುವುದು ಒಳ್ಳೆಯದು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ