NEWSನಮ್ಮಜಿಲ್ಲೆನಮ್ಮರಾಜ್ಯ

ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌

ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಂಟಿ ಅ*ಗ್ಯರು ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಕೂಟ ಹಾಗೂ ಒಕ್ಕೂಟದ ಪದಾಧಿಕಾರಿ ಜಯರಾಮ್‌ ರಾಥೋಡ್‌ ಸವಾಲ್‌ ಹಾಕಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು,  ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ನೀವು ಈ ಹೋರಾಟದಿಂದ ಹಿಂದೆ ಸರಿಯುತ್ತೀರೆಂಬ ನಿಮ್ಮ ಸಂಘಟನೆಯ ಮುಖಂಡರುಗಳ ಆಂತರಿಕ ವರದಿ ನನ್ನ ಬಳಿ ಇದೆ… ಎಚ್ಚರ ಎಂದು  ಹೇಳಿದ್ದಾರೆ.

ಸಾರಿಗೆ ನೌಕರರಿಗೆ ಒಳಿತಾಗೋ ಹಾಗಿದ್ದರೆ ಕೂಟ ಮತ್ತು ಒಕ್ಕೂಟ ಯಾವ ತ್ಯಾಗಕ್ಕೂ ಸಿದ್ಧ ಎಂದು ವಾಗ್ದಾನ ಮಾಡಿದ್ವಿ ನುಡಿದಂತೆ ನಡೆಯುತ್ತಿದ್ದೇವೆ. ಆದರೆ ಜಂಟಿ ಕ್ರಿಯಾ ಸಮಿತಿ ನೌಕರರಿಗೆ ಒಳ್ಳೆಯದನ್ನ ಮಾಡುವ ಇಚ್ಛಾಶಕ್ತಿ ಇದ್ದರೆ ನಿನ್ನೆ ದಿನ ಒಬ್ಬ ಹಿಂಬಾಲಕನನ್ನು ಬಿಟ್ಟು ಆಡಿಯೋ ಮಾಡಿ ನೌಕರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರಲಿಲ್ಲ.

ಇನ್ನು ಜಂಟಿ ಗಂಡು ಮಕ್ಕಳು ಇದ್ದರೆ ನೌಕರರನ್ನು ವಿರೋಧ ಕಟ್ಟಿಕೊಂಡು ಹೋರಾಟ ಮಾಡಿಯೇ ತೀರಬೇಕು, ಇಲ್ಲದಿದ್ದರೆ ಬಳೆ ತೊಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಾರಿಗೆ ನೌಕರರ ಏಳಿಗೆಗಾಗಿ ಮತ್ತು ಭವಿಷ್ಯದ ಬೆಳವಣಿಗೆಗಾಗಿ ಒಂದು ಹೆಜ್ಜೆ ಹಿಂದೆ ಇಟ್ಟು ಕೂಟ ಮತ್ತು ಒಕ್ಕೂಟ ಒಕ್ಕೋರಲಿನ ಹೋರಾಟಕ್ಕೆ ಮುಂದಾಗಿದೆ. ನಿಮಗೆ ನೌಕರರ ಹಿತಾಶಕ್ತಿ ಬೇಕಾಗಿದ್ದರೆ ಒಂದೇ ವೇದಿಕೆಯಿಂದ ಹೋರಾಟಕ್ಕೆ ಮುಂದಾಗಿ, ಇಲ್ಲವಾದರೆ ನೈತಿಕ ಹೊಣೆ ಹೊತ್ತು ಸಂಘಟನೆಯನ್ನು ವಿಸರ್ಜನೆ ಮಾಡಿ ಬಳೆ ತೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.

ಅಲ್ಲದೆ ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು. ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.

Megha
the authorMegha

Leave a Reply

error: Content is protected !!
Latest news
ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ಭಾರಿ ನಗದು ಬಹುಮಾನ: ಕ್ರೀಡಾಪಟುಗಳ ಬದುಕಿಗೆ ಭರವಸೆ ನೀಡಿದ ಸಿಎಂ BMTC: ಮಹಿಳಾ ಕಂಡಕ್ಟರ್‌ಗಳಿಗೆ ಶೇ.33ರಷ್ಟು ಮುಂಬಡ್ತಿ ಮೀಸಲಾತಿ ಅಸಾಧ್ಯ- ಸಂಸ್ಥೆ ನಿಯಮದಲ್ಲೂ ಇಲ್ಲ ಅವಕಾಶ ಎಂದ ಸಿಪಿಎ... ಶಕ್ತಿಯೋಜನೆಗಾಗಿ ರಾಜಸ್ಥಾನದ ಆಧಾರ್‌ ಕಾರ್ಡ್‌ಗೆ ಬೆಂಗಳೂರು ನಿವಾಸಿ ಎಂಬ ನಕಲಿ ಕಾರ್ಡ್‌ ಸೃಷ್ಟಿಸಿಕೊಂಡು ಮಹಿಳೆ ಓಡಾಟ! BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ?