ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್ ರಾಥೋಡ್ ಸವಾಲ್
ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು.

ಬೆಂಗಳೂರು: ಜಂಟಿ ಅ*ಗ್ಯರು ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಕೂಟ ಹಾಗೂ ಒಕ್ಕೂಟದ ಪದಾಧಿಕಾರಿ ಜಯರಾಮ್ ರಾಥೋಡ್ ಸವಾಲ್ ಹಾಕಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ನೀವು ಈ ಹೋರಾಟದಿಂದ ಹಿಂದೆ ಸರಿಯುತ್ತೀರೆಂಬ ನಿಮ್ಮ ಸಂಘಟನೆಯ ಮುಖಂಡರುಗಳ ಆಂತರಿಕ ವರದಿ ನನ್ನ ಬಳಿ ಇದೆ… ಎಚ್ಚರ ಎಂದು ಹೇಳಿದ್ದಾರೆ.
ಸಾರಿಗೆ ನೌಕರರಿಗೆ ಒಳಿತಾಗೋ ಹಾಗಿದ್ದರೆ ಕೂಟ ಮತ್ತು ಒಕ್ಕೂಟ ಯಾವ ತ್ಯಾಗಕ್ಕೂ ಸಿದ್ಧ ಎಂದು ವಾಗ್ದಾನ ಮಾಡಿದ್ವಿ ನುಡಿದಂತೆ ನಡೆಯುತ್ತಿದ್ದೇವೆ. ಆದರೆ ಜಂಟಿ ಕ್ರಿಯಾ ಸಮಿತಿ ನೌಕರರಿಗೆ ಒಳ್ಳೆಯದನ್ನ ಮಾಡುವ ಇಚ್ಛಾಶಕ್ತಿ ಇದ್ದರೆ ನಿನ್ನೆ ದಿನ ಒಬ್ಬ ಹಿಂಬಾಲಕನನ್ನು ಬಿಟ್ಟು ಆಡಿಯೋ ಮಾಡಿ ನೌಕರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರಲಿಲ್ಲ.
ಇನ್ನು ಜಂಟಿ ಗಂಡು ಮಕ್ಕಳು ಇದ್ದರೆ ನೌಕರರನ್ನು ವಿರೋಧ ಕಟ್ಟಿಕೊಂಡು ಹೋರಾಟ ಮಾಡಿಯೇ ತೀರಬೇಕು, ಇಲ್ಲದಿದ್ದರೆ ಬಳೆ ತೊಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಏಳಿಗೆಗಾಗಿ ಮತ್ತು ಭವಿಷ್ಯದ ಬೆಳವಣಿಗೆಗಾಗಿ ಒಂದು ಹೆಜ್ಜೆ ಹಿಂದೆ ಇಟ್ಟು ಕೂಟ ಮತ್ತು ಒಕ್ಕೂಟ ಒಕ್ಕೋರಲಿನ ಹೋರಾಟಕ್ಕೆ ಮುಂದಾಗಿದೆ. ನಿಮಗೆ ನೌಕರರ ಹಿತಾಶಕ್ತಿ ಬೇಕಾಗಿದ್ದರೆ ಒಂದೇ ವೇದಿಕೆಯಿಂದ ಹೋರಾಟಕ್ಕೆ ಮುಂದಾಗಿ, ಇಲ್ಲವಾದರೆ ನೈತಿಕ ಹೊಣೆ ಹೊತ್ತು ಸಂಘಟನೆಯನ್ನು ವಿಸರ್ಜನೆ ಮಾಡಿ ಬಳೆ ತೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.
ಅಲ್ಲದೆ ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು. ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.
Related









