NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ!

ಸಾರಿಗೆ ಸಂಸ್ಥೆಯ ಹಿರಿಯ ಚಾಲಕರೊಬ್ಬರು ತಮ್ಮ ಸೇವೆಯ ಕೊನೆಯ ದಿನದಂದು ತಾವು ದಿನನಿತ್ಯ ಚಲಾಯಿಸುತ್ತಿದ್ದ ಬಸ್ಸಿನ ಸ್ಟೀರಿಂಗ್ ಚಕ್ರವನ್ನು ಅತ್ಯಂತ ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದ್ದು, ಪ್ರೀತಿಯಿಂದ ಮುತ್ತಿಕ್ಕಿ ಭಾವುಕರಾಗಿದ್ದು, ಇಷ್ಟು ವರ್ಷಗಳ ಕಾಲ ತಮಗೆ ಅನ್ನ ನೀಡಿದ ವಾಹನವನ್ನು ಅಗಲುವ ನೋವಿನಲ್ಲಿ ಅತಿಯಾದ ದುಃಖ ಮತ್ತೊಂದೆಡೆ ಸಂತೋಷದಿಂದಲೂ ಅವರ ಕಣ್ಣುಗಳು ಒದ್ದೆಯಾದವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾಮಾನ್ಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ನಿವೃತ್ತ ಅಧಿಕಾರಿಗಳು ನೌಕರರಿಗೆ ತಿಂಗಳ ಕೊನೆಯ ದಿನ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿ ಸಾಧ್ಯವಾದರೆ ನಿವೃತ್ತ ಕುಟುಂಬವನ್ನು ಕರೆಸಿಕೊಂಡು ಸನ್ಮಾನ ಮಾಡುವ ಮೂಲಕ ಹೃದಯ ಸ್ಪರ್ಷಿ ಬೀಳ್ಕೊಡಲಾಗುತ್ತದೆ.

ಆದರೆ, ಈ 2026ರ ಮೇ 31 ಭಾನುವಾರ (ನಾಳೆ ) ಬಂದಿರುವುದರಿಂದ ಸಂಸ್ಥೆಯ ನೌಕರರಿಗೆ ಮೇ 30ರಂದೆ ಬೀಳ್ಕೊಡಲಾಗುತ್ತಿದೆ. ಅದಂತೆ ದೀರ್ಘಕಾಲದ ಸೇವೆ ಮುಗಿಸಿ ನಿವೃತ್ತರಾಗುವ ಕ್ಷಣ ಪ್ರತಿಯೊಬ್ಬರಿಗೂ ಭಾವುಕವಾಗಿರುತ್ತದೆ. ಅದರಲ್ಲೂ ಸಾರ್ವಜನಿಕ ಸೇವೆಯಲ್ಲಿ ದಶಕಗಳ ಕಾಲ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಅವರ ಗಮ್ಯ ಸ್ಥಾನಕ್ಕೆ ತಲುಪಿಸಿದ ಚಾಲನಾಸಿಬ್ಬಂದಿಗಳ ಸೇವೆ ಅನಿಸ್ಮರಣೀಯವಾದುದು.

ಅದರಂತೆ ಕೆಎಸ್‌ಆರ್‌ಟಿಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಾಳೆ (ಮೇ 31ರಂದು) ನಿವೃತ್ತರಾಗುತ್ತಿರುವ ಚಾಲಕರೊಬ್ಬರ ನಿವೃತ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.

ಹೌದು! ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ತಮ್ಮ 34 ವರ್ಷಗಳ ಸುದೀರ್ಘ ಮತ್ತು ಯಶಸ್ವಿ ಸೇವೆಯ ನಂತರ ನಿವೃತ್ತಿ ಹೊಂದಿದ್ದು, ಇಂಟರ್ನೆಟ್ ಈ ಕ್ಷಣವನ್ನು ಅತ್ಯಂತ ಗೌರವದಿಂದ ಸಂಭ್ರಮಿಸುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಸಾರಿಗೆ ಸಂಸ್ಥೆಯ ಹಿರಿಯ ಚಾಲಕರೊಬ್ಬರು ತಮ್ಮ ಸೇವೆಯ ಕೊನೆಯ ದಿನದಂದು ತಾವು ದಿನನಿತ್ಯ ಚಲಾಯಿಸುತ್ತಿದ್ದ ಬಸ್ಸಿನ ಸ್ಟೀರಿಂಗ್ ಚಕ್ರವನ್ನು ಅತ್ಯಂತ ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದ್ದು, ಪ್ರೀತಿಯಿಂದ ಮುತ್ತಿಕ್ಕಿ ಭಾವುಕರಾಗಿದ್ದು, ಇಷ್ಟು ವರ್ಷಗಳ ಕಾಲ ತಮಗೆ ಅನ್ನ ನೀಡಿದ ವಾಹನವನ್ನು ಅಗಲುವ ನೋವಿನಲ್ಲಿ ಅತಿಯಾದ ದುಃಖ ಮತ್ತೊಂದೆಡೆ ಸಂತೋಷದಿಂದಲೂ ಅವರ ಕಣ್ಣುಗಳು ಒದ್ದೆಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

‘Going to miss this man’ (ಈ ವ್ಯಕ್ತಿಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ) ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋ, ಬಸ್ ಚಾಲಕರು ತಮ್ಮ ವೃತ್ತಿ ಮತ್ತು ವಾಹನದೊಂದಿಗೆ ಬೆಳೆಸಿಕೊಳ್ಳುವ ಅಪಾರ ಭಾವನಾತ್ಮಕ ಬಂಧಕ್ಕೆ ಸಾಕ್ಷಿಯಾಗಿದೆ.

ಚಾಲಕನ ನಿಷ್ಠೆಗೆ ತಲೆಬಾಗಿದ ನೆಟ್ಟಿಗರು: ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಚಾಲಕನಿಗೆ ಶುಭ ಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಯಾವುದೇ ಅಪಘಾತಗಳಿಲ್ಲದೆ 34 ವರ್ಷಗಳ ಕಾಲ ಜನರನ್ನು ಸುರಕ್ಷಿತವಾಗಿ ಕರೆದೊಯ್ದ ಇವರ ಸೇವೆ ಶ್ಲಾಘನೀಯ, ಇದು ಕೇವಲ ಕೆಲಸವಲ್ಲ, ಅವರ ಪಾಲಿನ ದೇವಸ್ಥಾನ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

Deva
the authorDeva

Leave a Reply

error: Content is protected !!
Latest news
NWKRTC: ಧಾರವಾಡ ಗ್ರಾ.ವಿಭಾಗದ ನಿವೃತ್ತ ಅಧಿಕಾರಿಗಳಿಗೆ ಹೃದಯಸ್ಪರ್ಷಿ ಬೀಳ್ಕೊಡುಗೆ KSRTC: ಮೂರು ದಶಕಗಳ ಸುದೀರ್ಘ ಸೇವೆ ಬಳಿಕ ಸಂಸ್ಥೆಯ ಬಸ್‌ ಚಾಲಕ ನಿವೃತ್ತಿ-  ಮರೆಯಲಾಗದ ಸಂದರ್ಭ ಸೆರೆ! ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ KKRTC: ಬಸ್ ನಿಲ್ದಾಣದಲ್ಲಿ ಮಹಿಳೆ ಜತೆ ಅನುಚಿತ ವರ್ತನೆ-ಕಿಡಿಗೇಡಿಗೆ ಚಪ್ಪಲಿ ಏಟು ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್ – ಜೂ.3ರಂದು ನೂತನ ಸಿಎಂಆಗಿ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ ಪೆಟ್ರೋಲ್‌, ಡೀಸೆಲ್‌ ಬಳಿಕ CNG ದರದಲ್ಲೂ ಏರಿಕೆ- ಎರಡನೇ ಬಾರಿಗೆ 2ರೂ. ಹೆಚ್ಚಳ -ಗ್ರಾಹಕರಿಗೆ ಶಾಕ್‌ ಕೊಟ್ಟ MGL ಆದೇಶ ಕಾಯ್ದಿರಿಸಿದ 3 ತಿಂಗಳೊಳಗಾಗಿ ಎಲ್ಲ ಕೋರ್ಟ್‌ಗಳಲ್ಲೂ ಅಂತಿಮ ತೀರ್ಪು ಹೊರಬೀಳಬೇಕು: ಸುಪ್ರೀಂ ಮಹತ್ವದ ಆದೇಶ ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅಧ್ಯಕ್ಷ ತಾಕೀತು ವಿದ್ಯುತ್ ಗ್ರಾಹಕರಿಗೆ ಗುಡ್‌ನ್ಯೂಸ್‌: ಬಿಲ್‌ಗಳಿಗೆ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಮಾಡಿ KERC ಆದೇಶ- ಜೂನ್‌... BMTC KSRTC ನಿವೃತ್ತ ನೌಕರರ ಪ್ರತಿಭಟನೆ: ಕನಿಷ್ಠ ಪಿಂಚಣಿ 7500 ರೂ. ನೀಡಲು ಆಗ್ರಹ