NEWSನಮ್ಮಜಿಲ್ಲೆರಾಜಕೀಯ

ಖಾಲಿ ಹಾಳೆ ತುಂಬಿಸಿರುವ ಸಿಎಂ ಬಿಎಸ್‌ವೈರ ಅರಳು ಮರಳು ಬಜೆಟ್: ಎಎಪಿ ನಾಗಣ್ಣ ಲೇವಡಿ

ವರ್ಷಕ್ಕೆ 60 ಸಾವಿರ ಕೋಟಿ ರೂ.ಗಳಿಗೆ ಬಡ್ಡಿ ಏರಿಸಿದ್ದೆ ಬಿಎಸ್‌ವೈ ಬಜೆಟ್‌ನ ಸಾಧನೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ 2.50 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಕೇವಲ ಖಾಲಿ ಹಾಳೆಗಳನ್ನು ತುಂಬಿಸಿರುವ ಅರಳು ಮರುಳಲ್ಲಿ ಮಾಡಿರುವ ಸಾಲದ ಬಜೆಟ್ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪ ಅವರೇ ಹೇಳಿರುವಂತೆ 2.50 ಲಕ್ಷ ಕೋಟಿಯ ಗಾತ್ರದ ಬಜೆಟ್‌ನಲ್ಲಿ ಸರ್ಕಾರದ ಆದಾಯ 1.73 ಲಕ್ಷ ಕೋಟಿ ರೂ. ಆದಾಯ ಮಾತ್ರ. ಅಂದರೆ ಮಿಕ್ಕ 71ಸಾವಿರ ಕೋಟಿ ರೂ. ಸಾಲ ಎಂದಾಯಿತು. ಈಗಾಗಲೇ 4 ಲಕ್ಷ ಕೋಟಿ ರೂ. ಸಾಲವಿದ್ದು ಅದಕ್ಕೆ ಪ್ರತಿ ವರ್ಷ 45 ಸಾವಿರ ಕೋಟಿ ರೂ.ಗಳಷ್ಟು ಬಡ್ಡಿ ಮತ್ತು ಸಾಲ ಕಟ್ಟಲಾಗುತ್ತಿದೆ.

ಈ ಬಜೆಟ್‌ನಲ್ಲಿ ಮತ್ತಷ್ಟು ಸಾಲ ಮಾಡಿ ವರ್ಷಕ್ಕೆ ಬಡ್ಡಿಯನ್ನು 60 ಸಾವಿರ ಕೋಟಿ ರೂ.ಗಳಿಗೆ ಏರಿಸಿದ್ದೆ ಯಡಿಯೂರಪ್ಪ ಅವರ ಬಜೆಟ್‌ನ ಸಾಧನೆ. ಸರ್ಕಾರದ ಆದಾಯ ಹಾಗೂ ಸಾಲದ ಬಡ್ಡಿ ಕಳೆದರೆ ಉಳಿಯುವುದು 1.12 ಸಾವಿರ ಕೋಟಿ.‌ ಈ ಸಂಪತ್ತಿಗೆ ಬಜೆಟ್ ಮಾಡುವ ಅವಶ್ಯಕತೆ ಏನಾದರೂ ಇತ್ತು ಎಂದು ಹೇಳಿದರು.

ಆಹಾರ- ನಾಗರಿಕ ಪೂರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ತಲಾ ಶೇ 1, ಕೃಷಿಗೆ ಶೇ 3, ಕುಟುಂಬವು ಕಲ್ಯಾಣ- ಆರೋಗ್ಯಕ್ಕೆ ಶೇ 4, ಶಿಕ್ಷಣಕ್ಕೆ ಶೇ 11, ಗ್ರಾಮೀಣಾಭಿವೃದ್ಧಿಗೆ ಶೇ 6 ನೀಡಲಾಗಿದೆ. ಈ ಮೇಲಿನ ಅಂಕಿ ಅಂಶಗಳನ್ನು ನೋಡಿದರೆ ಸಾಕು ಸರ್ಕಾರ ಯಾವುದಕ್ಕೆ ಆಧ್ಯತೆ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಜೆಟ್‌‌ನಿಂದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

ಎಲ್ಲಾ ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡಿ ನಿಮ್ಮ ಚೇಲಾಗಳು ಸಂಭ್ರಮಪಡುವಂತೆ ಮಾಡಲು ಮಾತ್ರ ಈ ಬೋಗಸ್ ಬಜೆಟ್ ಮಂಡನೆ ಮಾಡಿದ್ದೀರಾ ಎಂದು ಕಿಡಿಕಾರಿದರು.

ದತ್ತಾತ್ರೇಯ ನಗರ ವಾರ್ಡ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್ ಮಾತನಾಡಿ, ಕಳೆದ ಬಾರಿಯ ಬಜೆಟ್‌ನಲ್ಲೂ ಮಹಿಳೆಯರಿಗೆ ಬಸ್‌ಪಾಸ್ ನೀಡುವುದಾಗಿ ಹೇಳಿದ್ದ ನೀವು ಈ ಬಾರಿಯೂ ಅದೇ ಭರವಸೆ ನೀಡಿದ್ದೀರಾ. ನಿರ್ಭಯಾ ಸೇಫ್ ಸಿಟಿ ಹೆಸರಿನಲ್ಲಿ ಮತ್ತೆ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಹೇಳಿ ಮಹಿಳಾ ಸುರಕ್ಷತೆ ಹೆಸರಿನಲ್ಲಿ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮಹಿಳೆಯರಿಗೆ ಕೇವಲ ಸಾಲ ನೀಡುತ್ತೇವೆ ಎಂದು ಹೇಳಿರುವ ನೀವು ಸಾಲದ ಬದಲು ಸಹಾಯಧನ ಕೊಡಿ ಇಲ್ಲದಿದ್ದರೆ ಈ ಬಜೆಟ್‌ ಅನ್ನು ಹಿಂಪಡೆದುಕೊಳ್ಳಿ ಎಂದು ಒತ್ತಾಯಿಸಿದರು.

Leave a Reply

error: Content is protected !!
LATEST
ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...