NEWSಆರೋಗ್ಯನಮ್ಮಜಿಲ್ಲೆಶಿಕ್ಷಣ-

ಮೈಸೂರು ಪಾರ್ಕ್‌ನಲ್ಲೇ ಹೆರಿಗೆ ಮಾಡಿಸಿದ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ

ಆರೋಗ್ಯವಾಗಿದ್ದಾರೆ ತಾಯಿ ಮಗು ಇಬ್ಬರು l ಶಿಕ್ಷಕಿಗೆ ಅಭಿನಂದನೆಗಳ ಮಹಾಪೂರ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶೋಭಾ ಅವರು ಇಂದು ಎಂದಿನಂತೆ ಶಾಲೆಗೆ ತೆರಳಲು ಸಬ್‌ಹರ್ಬನ್‌ ಬಸ್ ಸ್ಟ್ಯಾಂಡ್ ಗೆ ತೆರಳುವ ಸಂದರ್ಭದಲ್ಲಿ ನಗರದ ಪೀಪಲ್ಸ್ ಪಾರ್ಕ್ ಬಳಿ ಗರ್ಭಿಣಿ ಪ್ರಸವದ ನೋವು ತಡೆಯಲಾರದೆ ಚೀರಾಡುತ್ತಿದ್ದರು. ಅದನ್ನು ಕಂಡ ಶೋಭಾ ಅವರು ಸುಲಲಿತವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವನ್ನು ರಕ್ಷಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪ್ರಸವ ವೇದನೆ ತಾಳಲಾರದೆ ಚೀರಾಡುತ್ತಿದ್ದನ್ನು ಗಮನಿಸಿದ ಅಲ್ಲೆ ಸುತ್ತಮುತ್ತ ಇದ್ದ ಪುರುಷರು ಯಾರಾದರೂ ಈಕೆಗೆ ಸಹಾಯ ಮಾಡುವಂತೆ ಕೋರಿದರು. ಆಗ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಅವರು ಪ್ರಸವ ಮಾಡಿಸಲು ಸಹಕರಿಸಿದರು. ಈ ವೇಳೆ ಮಹಿಳೆ ಹಣ್ಣು ಮಗವಿಗೆ ಜನ್ಮನೀಡಿದರು. ಈ ಎರಡು ಹೆಣ್ಣು ಜೀವಗಳ ರಕ್ಷಣೆಯನ್ನು ಮಾಡಿ ಮಾನವೀಯತೆಯನ್ನು ಶೋಭಾ ಅವರು ಮೆರೆದಿದ್ದಾರೆ.

ಇನ್ನು ಅವರಿಗೆ ಹೆರಿಗೆ ಮಾಡಿಸುವುದು ಗೊತ್ತಿರಲಿಲ್ಲ. ಆದರೂ ಧೈರ್ಯಮಾಡಿ ಹೆರಿಗೆ ಮಾಡಿಸಿದ್ದು, ಅಲ್ಲಿದ್ದ ಪುರುಷರು ಕೂಡ ಶೋಭಾ ಅವರನ್ನು ಹಾಡಿಹೊಗಳಿದ್ದರು.

ಜಿಲ್ಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶೋಭಾ ಅವರನ್ನು ಸನ್ಮಾನಿಸಿ ಅವರ ಮಾನವೀಯ ಮೌಲ್ಯವು ನಮ್ಮ ಶಿಕ್ಷಣ ಇಲಾಖೆಗೆ ಮಾದರಿಯಾಗಿದೆ ಎಂದು ಶುಭ ಹಾರೈಸಿದರು. ಇನ್ನೊದೆಡೆ ಈ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಶೋಭಾ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಗುಣವನ್ನು ಶ್ಲಾಘಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸೋಮೇಗೌಡ, ಖಜಾಂಚಿಗಳಾದ ಮಹದೇವ್, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಿಂಗಿ ಸುರೇಶ್, ಸಂಘಟನಾ ಕಾರ್ಯದರ್ಶಿ ರೇವಣ್ಣ, ಶಾಸಕರ ಆಪ್ತ ಸಹಾಯಕ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ನಾಗರಾಜು, ಬಿ ಆರ್ ಪಿ ಗಳಾದ ಶ್ರೀಕಂಠ ಶಾಸ್ತ್ರಿ, ಅಂಕೇಶ್, ಸಿ ಆರ್ ಪಿ ಗಳಾದ ವೀಣಾಶ್ರೀ , ಶಿಕ್ಷಕರಾದ ಆಶಾ ಬಾಯಿ,ಅನ್ನಪೂರ್ಣ ನಗರಪಾಲಿಕೆ ಸದಸ್ಯರಾದ ಛಾಯ ಇದ್ದರು.

1 Comment

Leave a Reply

error: Content is protected !!
LATEST
ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ