KSRTC ನೌಕರರ ಶೇ.31ರಷ್ಟು ತುಟ್ಟಿಭತ್ಯೆ 2022 ಜುಲೈ 1ರ ಮೂಲ ವೇತನಕ್ಕೆ ವಿಲೀನಗೊಳಿಸಿ ಎಂಡಿ ಆದೇಶ

- ನಗರ ಪರಿಹಾರ ಭತ್ಯೆ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 900 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 500ರೂ.ಗಳಿಂದ 750ರೂ.ಗಳಿಗೆ ಹೆಚ್ಚಳ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್ 2024 ರಿಂದ ಜಾರಿಗೆ ಬರುವಂತೆ ಮೂಲ ತುಟ್ಟಿಭತ್ಯೆಯನ್ನಾಗಿ ಪರಿಗಣಿಸುವ ಮತ್ತು ಮಂಜೂರು ಮಾಡಿರುವ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವಂತೆ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು ಇಂದು (ಜೂನ್ 26) ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಸರ್ಕಾರವು 23ನೇ ಆಗಸ್ಟ್ 2024 ರಲ್ಲಿ ತನ್ನ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನಕ್ಕೆ ವಿಲೀನಗೊಳಿಸಿ ಸರ್ಕಾರಿ ನೌಕರರ ವೇತನವನ್ನು ಹಾಗೂ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಮತ್ತು ಇತರೇ ಭತ್ಯೆಗಳ ದರಗಳನ್ನು ಪರಿಷ್ಕರಿಸಿ 1 ನೇ ಆಗಸ್ಟ್ 2024 ರಿಂದ ಆರ್ಥಿಕ ಸೌಲಭ್ಯ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಕೈಗಾರಿಕಾ ಒಪ್ಪಂದದ ಪ್ರಕಾರ ಸಾರಿಗೆ ನಿಗಮಗಳಲ್ಲಿ ಸಹ ಸರ್ಕಾರದಲ್ಲಿ ಕಾಲಕಾಲಕ್ಕೆ ಮಂಜೂರಾಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು ಅದೇ ದರಗಳಲ್ಲಿ ಹಾಗೂ ಅದೇ ದಿನಾಂಕದಿಂದ ಅನ್ವಯಿಸಿ ಪಾವತಿಸಬೇಕಾಗಿರುವುದರಿಂದ, ಮೇಲ್ಕಂಡಂತೆ ಶೇ.31 ರಷ್ಟು ತುಟ್ಟಿಭತ್ಯೆಯನ್ನು, ಮೂಲ ತುಟ್ಟಿಭತ್ಯೆಯನ್ನಾಗಿ ನಿಗದಿಪಡಿಸಲು ಹಾಗೂ ಕೆಳಕಂಡಂತೆ ಪರಿಷ್ಕರಿಸಿರುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳನ್ನು 1 ನೇ ಆಗಸ್ಟ್ 2024 ರಿಂದ ಜಾರಿಗೊಳಿಸಲು ಎಂಡಿ ಆದೇಶ ಹೊರಡಿಸಿದ್ದಾರೆ.
01.07.2022 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಕಾಲ್ಪನಿಕವಾಗಿ ಈ ಕೆಳಕಂಡಂತೆ ಕ್ರಮಬದ್ಧಗೊಳಿ ಸರ್ಕಾರ ಜಾರಿ ಮಾಡಿದೆ.
ಅಂದರೆ 01.07.2022ರಲ್ಲಿ ಶೂನ್ಯ, 01.01.2023 ಶೇ.2.75, 01.07.2023ರಲ್ಲಿ ಶೇ.5.50 ಹಾಗೂ 01.01.2024ರಲ್ಲಿ ಶೇ. 8.50ರಷ್ಟು ತುಟ್ಟಿಭತ್ಯೆ ಇತ್ತು. ಇದರಂತೆ ಸರ್ಕಾರದ ಪ್ರಸ್ತುತ ಆದೇಶಗಳ ಪ್ರಕಾರ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯ ಉದ್ದೇಶಕ್ಕಾಗಿ ನಗರಗಳು ಮತ್ತು ಇತರೇ ಸ್ಥಳಗಳ ವರ್ಗೀಕರಣವು ಮುಂದಿನ ಆದೇಶದವರೆಗೆ ಮುಂದುವರಿದು ಅನ್ವಯಿಸತಕ್ಕದ್ದು.
ಅದರಂತೆ 01.08.2024 ರಿಂದ ಅನ್ವಯಿಸುವಂತೆ ಮನೆ ಬಾಡಿಗೆ ಭತ್ಯೆಯ ವಿವಿಧ ದರಗಳನ್ನು ಸರ್ಕಾರ ಈ ಕೆಳಕಂಡಂತೆ ಬದಲಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಇದು ನಮ್ಮ ಸಾರಿಗೆ ನೌಕರರಿಗೂ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಇನ್ನು ಜನಸಂಖ್ಯೆ ವರ್ಗೀಕರಣದ ಆಧಾರದ ಮೇರೆಗೆ ಮನೆಬಾಡಿಗೆ ಭತ್ಯೆಯ ದರಗಳು 25 ಲಕ್ಷ ಮತ್ತು ಅದಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಶೇ.20 ರಷ್ಟು. ಅದೇ ರೀತಿ 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ ಜನಸಂಖ್ಯೆ ಇರುವ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರಿಗೆ ಶೇ.15 ರಷ್ಟು ಹಾಗೂ 5 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪಟ್ಟಣಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಶೇ.7.5 ರಷ್ಟು ಮನೆಬಾಡಿಗೆ ಭತ್ಯೆ ದರವನ್ನು ನಿಗದಿಪಡಿಸಿದೆ.
ಅದರಂತೆ ಈ ಕೆಳಗೆ ನಮೂದಿಸಿರುವ ನಗರಗಳು /ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವರ್ಗದ ನೌಕರರಿಗೆ/ ಅಧಿಕಾರಿಗಳಿಗೆ ಲಭ್ಯವಿರುವ ನಗರ ಪರಿಹಾರ ಭತ್ಯೆಯು ಅವುಗಳ ಮುಂದೆ ನಮೂದಿಸಿ ನಿಗದಿಪಡಿಸಿರುವ ದರಗಳಲ್ಲಿ 01ನೇ ಆಗಸ್ಟ್ 2024 ರಿಂದ ಜಾರಿಗೊಳಿಸತಕ್ಕದ್ದು.
ನಗರ ಪರಿಹಾರ ಭತ್ಯೆಯ ದರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 900 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 500ರೂ.ಗಳಿಂದ 750ರೂಗಳಿಗೆ ಅಂದರೆ 250 ರೂಪಾಯಿ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಬೆಳಗಾವಿ(ಯು.ಎ.), ಹುಬ್ಬಳ್ಳಿ-ಧಾರವಾಡ ಮಂಗಳೂರು (ಯು.ಎ) ಮೈಸೂರು(ಯು.ಎ.) ಕಲಬುರಗಿ ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 700 ರೂ. ಹಾಗೆಯೇ ಸಿ ಮತ್ತು ಡಿ ಗ್ರೂಪ್ ನೌಕರರಿಗೆ 600 ರೂಗಳಿಗೆ ಹೆಚ್ಚಿಸಿದ್ದಾರೆ. ಇದು ಸಾರಿಗೆ ಸಾರಿಗೆ ಅಧಿಕಾರಿಗಳು ಮತ್ತು ನೌಕರರಿಗೂ ಅನ್ವಯವಾಗಲಿದೆ.
ಈ ಪ್ರಯುಕ್ತ ದಿನಾಂಕ 01.08.2024ರಲ್ಲಿ ನಿಗಮದ ಸೇವೆಯಲ್ಲಿದ್ದಂತಹ ಪ್ರತಿ ಅಧಿಕಾರಿ/ ನೌಕರರಿಗೆ ಕಾಲ್ಪನಿಕವಾಗಿ ನಿಗದಿಪಡಿಸಿರುವಂತೆ 01.07.2022 ರ ಮೂಲವೇತನದ ಮೇಲೆ ಶೇ.31 ರಷ್ಟನ್ನು ಮೂಲತುಟ್ಟಿಭತ್ಯೆಯನ್ನಾಗಿ ನಿಗದಿಗೊಳಿಸಿ (50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಹಾಗೂ 50 ಪೈಸೆಗಿಂತ ಕಡಿಮೆ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು) ಈ ಮೊತ್ತವನ್ನು ಸ್ಪಷ್ಟವಾಗಿ ಅವರ ಸೇವಾ ಪುಸ್ತಕದಲ್ಲಿ ನಮೂದಿಸಿ ಆಡಳಿತಾಧಿಕಾರಿ/ಸಹಾಯಕ ಆಡಳಿತಾಧಿಕಾರಿಯವರಿಂದ ದೃಡೀಕರಿಸತಕ್ಕದ್ದು.
ಈ ನಡಾವಳಿ/ದಾಖಲಾತಿಯನ್ನು ಸಂಬಂಧಿತ ವಿಭಾಗದ ಲೆಕ್ಕಾಧಿಕಾರಿ/ ಸಹಾಯಕ ಲೆಕ್ಕಾಧಿಕಾರಿಯವರಿಂದ ಆಡಿಟ್ ಮಾಡಿಸತಕ್ಕದ್ದು. ತದನಂತರ ಆಯಾ ಅಧಿಕಾರಿ/ ನೌಕರರಿಗೆ ಲಭ್ಯವಾಗುವ ಮೂಲತುಟ್ಟಿಭತ್ಯೆಯನ್ನು ಎಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ಅಳವಡಿಸಲು ಆಡಳಿತ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳುವುದು.
ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗೆ ಸಂಬಂದಪಟ್ಟಂತೆ 01.08.2024 ರಿಂದ ಅನ್ವಯವಾಗುವಂತೆ ಸುತ್ತೋಲೆ ಕ್ರಮ ಸಂಖ್ಯೆ (4) ಮತ್ತು (5) ರಲ್ಲಿ ನೀಡಿರುವ ದರಗಳನ್ನು ಅನ್ವಯವಾಗುವ ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸೀಮಿತಗೊಳಿಸಿದಂತೆ ಪ್ರಸ್ತುತ ಮೂಲ ವೇತನ ಹಾಗೂ 01.07.2022 ರ ಮೂಲ ವೇತನ ಮೊತ್ತದ ಮೇಲೆ ನಿಗದಿಗೊಳಿಸಲಾದ ಶೇ 31 ರ ಮೂಲ ತುಟ್ಟಿಭತ್ಯೆಯ ಒಟ್ಟು ಮೊತ್ತದ ಮೇಲೆ ಲೆಕ್ಕಾಚಾರ ಮಾಡಿ ಜುಲೈ-2025 ರ ಮಾಹೆಯ ವೇತನದಿಂದ ಮತ್ತು ಮುಂದಕ್ಕೆ ಪಾವತಿಸುವುದು ಹಾಗೂ ಆಗಸ್ಟ್-2024 ರಿಂದ ಜೂನ್-2025 ರವರೆಗಿನ 11 ತಿಂಗಳ ವ್ಯತ್ಯಾಸವನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡುವುದು.
ಜುಲೈ-2025 ರಿಂದ ಮತ್ತು ಮುಂದಕ್ಕೆ ಸಂಸ್ಥೆಯಲ್ಲಿ ನಿವೃತ್ತರಾಗುವ ಮತ್ತು ರಾಜಿನಾಮೆ. ಮರಣ, ವಜಾ ಮುಂತಾದ ಪ್ರಕರಣಗಳಲ್ಲಿ ಪಾವತಿಸಲಾಗುವ ಉಪದಾನ ಮೊತ್ತವನ್ನು ಲೆಕ್ಕಾಚಾರ ಮಾಡಲು ಸೇವಾಂತ್ಯದ ದಿನಾಂಕದಂದು ಇರುವ ಮೂಲ ವೇತನ ಮೊತ್ತಕ್ಕೆ ಮೇಲ್ಕಂಡಂತೆ ನಿಗದಿಗೊಳಿಸಲಾದ ಶೇ.31ರ ಮೂಲ ತುಟ್ಟಿಭತ್ಯೆಯ ಮೊತ್ತವನ್ನು ಕೂಡಿಸಿ ಉಪದಾನ ಮೊತ್ತವನ್ನು ಉಪದಾನ ಕಾಯ್ದೆ 1972 ಅಥವಾ ಸಂಸ್ಥೆಯ ಉಪದಾನ ನಿಯಮಾವಳಿ ಅನ್ವಯ ಲೆಕ್ಕಾಚಾರ ಮಾಡಿ ಇವುಗಳಲ್ಲಿ ಉದ್ಯೋಗಿಗೆ ಯಾವುದು ಲಾಭದಾಯಕವಾಗುವುದೋ ಆ ಮೊತ್ತವನ್ನು (ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ಉಪಧನ ಸುತ್ತೋಲೆಗಳನ್ವಯ) ಪಾವತಿ ಮಾಡುವುದು (1972 ರ ಉಪದಾನ ಕಾಯ್ದೆಯ ಕಡ್ಡಾಯವಾಗಿ ಅನ್ವಯಿಸುವ ಉದ್ಯೋಗಿಗಳನ್ನು ಹೊರತುಪಡಿಸಿ)
ಜುಲೈ-2025 ರಿಂದ ಮುಂದಕ್ಕೆ ಗಳಿಕೆ ರಜೆ ನಗದೀಕರಣ ಮೊತ್ತವನ್ನು ಸೇವೆಯಲ್ಲಿ ಮುಂದುವರಿದ ಹಾಗೂ ಸೇವಾಂತ್ಯಗೊಂಡ ಪ್ರಕರಣಗಳಲ್ಲಿ ಪಾವತಿ ಮಾಡುವಾಗ ಮೂಲ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ಕೂಡಿಸಿ ಲೆಕ್ಕಾಚಾರ ಮಾಡುವುದು.
KSRTC ನಿಗಮದಲ್ಲಿ ಆಗಸ್ಟ್-2024 ರಿಂದ ಜೂನ್-2025 ರವರೆಗಿನ ಮಾಹೆಗಳಲ್ಲಿ ಸೇವಾ ನಿರತ ಮತ್ತು ಸೇವಾ ವಿಮುಕ್ತಿ ಹೊಂದಿದವರಿಗೆ ಮೂಲತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ/ ನಗರ ಪರಿಹಾರ ಭತ್ಯೆಗಳ ನಿಗದಿಯಿಂದ ಉಂಟಾಗುವ ವ್ಯತ್ಯಾಸಗಳನ್ನು ಲೆಕ್ಕಾಚಾರಗೊಳಿಸಿ ಪಾವತಿಸಲು ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು.
ಸಹೋದರ ಸಂಸ್ಥೆಗಳಾದ BMTC/ NWKRTC/ KKRTC ಸಂಸ್ಥೆಗಳು ಹಿಂಬಾಕಿ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸುವುದು. ಈ ಮೇಲಿನಂತೆ ಜುಲೈ-2025 ರ ವೇತನದಲ್ಲಿ ಮತ್ತು ಮುಂದಕ್ಕೆ ಪಾವತಿಸಬೇಕಾಗಿರುವ ಪರಿಷ್ಕೃತ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ದರಗಳು ಎಲ್ಲ ಅಧಿಕಾರಿ ಮತ್ತು ನೌಕರರಿಗೂ ಸಹ ಅನ್ವಯವಾಗಲಿದ್ದು, ಈ ಕಚೇರಿಯಿಂದ ಪರಿಷ್ಕೃತ ವೇತನ ಪಟ್ಟಿಗಳನ್ನು ನಿರೀಕ್ಷೆ ಮಾಡದೇ ಮೇಲ್ಕಂಡಂತೆ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸ್ಥೆಯ ಎಂಡಿ ಆದೇಶ ಹೊರಡಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್ ಫೈಲ್ ನೋಡಬಹುದು: BDA circular 04-1
Related

You Might Also Like
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...