KSRTC: ಡಿಸೆಂಬರ್ ವೇತನಕ್ಕೆ 14 ತಿಂಗಳ ಹಿಂಬಾಕಿ ಸೇರಿಸಿ ಪಾವತಿಸದ ಸಾರಿಗೆ ಸಚಿವರ ವಿರುದ್ಧ BMS ಕಿಡಿ

ಬೆಂಗಳೂರು: 2025ರ ಡಿಸೆಂಬರ್ ವೇತನದಲ್ಲಿ 14 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ಕೊಡಬೇಕು ಜತೆಗೆ ಉಳಿದ 24 ತಿಂಗಳ ಹಿಂಬಾಕಿಯನ್ನು ಹಂತಹಂತವಾಗಿ ಬಿಡುಗಡೆ ಮಾಡಬೇಕು ಎಂದು ಸಾರಿಗೆ ಸಚಿವರಿಗೆ ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ ಡಿ.13ರಂದು ಮನವಿ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿತ್ತು. ಆದರೆ ಸಾರಿಗೆ ಸಚಿವರು ಬಿಎಂಎಸ್ ಮುಖಂಡರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಅಂದರೆ ಜನವರಿ 1ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ಪಾವತಿಸಲಾಗಿದೆ. ಆದರೆ, ನಾವು ಒತ್ತಾಯ ಮಾಡಿದಂತೆ 14 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿಲ್ಲ. ಅಂದರೆ ಸರ್ಕಾರ ಮತ್ತು ಸಾರಿಗೆ ಸಚಿವರು ನೌಕರರನ್ನು ಭಾರಿ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಡಿ.13ರ ಶನಿವಾರ ಬೆಳಗ್ಗೆ ನಡೆದ ಅಂದಿನ ವೇತನ ಸಂಬಂಧ ಸಭೆಯಲ್ಲಿ ಯಾವುದೇ ಸ್ಪಷ್ಟ ನಿಲುವನ್ನು ಸಾರಿಗೆ ಸಚಿವರು ತೆಗೆದುಕೊಂಡಿಲ್ಲ. ಹೀಗಾಗಿ ನೌಕರರ ತಾಳ್ಮೆಕಟ್ಟೆ ಒಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನಪಡಿಸಬೇಕು ಎಂದರೆ ಕೂಡಲೇ ಇದೇ ಡಿಸೆಂಬರ್ ವೇತನದಲ್ಲಿ 14 ತಿಂಗಳ ಹಿಂಬಾಕಿ ಕೊಡುತ್ತೇವೆ ಎಂದು ತಿಳಿಸಿ ಬಿಡುಗಡೆಮಾಡಬೇಕು ಎಂದು ಬಿಎಂಎಸ್ ಪದಾಧಿಕಾರಗಳು ಅಂದು ಆಗ್ರಹಿಸಿದ್ದರು.
ಇನ್ನು ತಾವು 38 ತಿಂಗಳ ವೇತನ ಹಿಂಬಾಕಿ ಪಾವತಿ ಮತ್ತು 01.01.2024 ರಿಂದ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿ ಮಾಡಬೇಕು. ಈ ಹಿಂದೆ 26.11.2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಸಿದಂತೆ. ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರಿಗೆ ಸಿಗಬೇಕಿರುವ 38 ತಿಂಗಳ ವೇತನ
ಹಿಂಬಾಕಿ ಮತ್ತು 01.01.2024 ರಿಂದ ಜಾರಿಯಾಗಬೇಕಿರುವ ವೇತನ ಪರಿಷ್ಕರಣಿ ಸಂಬಂಧ ರಾಜ್ಯ ಸರ್ಕಾರ ಅಥವಾ ಆಡಳಿತ ವರ್ಗವು ಈವರೆಗೂ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ ಎಂದು ಆ ದಿನವೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಜತೆಗೆ ನೌಕರರ ಸಂಘಟನೆಗಳ ನಡುವೆ ಹಲವು ಸುತ್ತಿನ ಸಭೆಗಳನ್ನು ಸಿಎಂ, ಸಾರಿಗೆ ಸಚಿವರು ಹಾಗೂ ಅಧಿಕಾರಿಗಳು ನಡೆಸಿದ್ದರೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿರುವುದಿಲ್ಲ ಮತ್ತು ಈ ವಿಷಯದಲ್ಲಿ ಸಂಘಟನೆಗಳನ್ನು ವಿಭಜಿಸಿ ಸಭೆಗಳನ್ನು ನಡೆಸುವ ಮೂಲಕ ಉದ್ದೇಶಪೂರ್ವಕವಾಗಿಯೇ ವಿಳಂಬಧೋರಣೆಯನ್ನು ಅನುಸರಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಕಿಡಿಕಾರಿದ್ದರು.
ಅಲ್ಲದೆ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮೂರು-ನಾಲ್ಕು ಬಾರಿ ಸಭೆ ನಡೆಸಿದರೂ ನೌಕರರ ಸಮಸ್ಯೆ ಬಗೆಹರಿಯದಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ ಆಗಿದೆ ಎಂದು ಸರ್ಕಾರದ ನಡೆಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಈ ಎಲ್ಲದರ ನಡುವೆ ನಮ್ಮ ಸಂಘಟನೆಯು 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ಜಾರಿಗೊಳಿಸಬೇಕಾಗಿರುವ ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಸ್ಪಷ್ಟ ನಿಲುವನ್ನು ತಮಗೆ ತಿಳಿಸಿದ್ದು, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರದ ವಿಳಂಬಧೋರಣೆಯಿಂದ ನಾಲ್ಕೂ ನಿಗಮದ ನೌಕರರಿಗೆ ಈಗಾಗಲೇ ಲಕ್ಷಾಂತರ ರೂ.ಗಳ ಆರ್ಥಿಕ ನಷ್ಟವುಂಟಾಗಿದೆ. ಈ ಸಮಸ್ಯೆಯನ್ನು ಈ ಕೂಡಲೇ ಬಗೆಹರಿಸದಿದ್ದಲ್ಲಿ ನೌಕರರಿಗೆ ಮತ್ತಷ್ಟು ನಷ್ಟ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಆದ್ದರಿಂದ ಸಮಸ್ಯೆಯನ್ನು ಬಗೆಹರಿಸಲು ಮತ್ತೊಮ್ಮೆ ತಮ್ಮಲ್ಲ ಆಗ್ರಹಿಸುತ್ತಿದ್ದೇವೆ ಎಂದು ಮನವಿ ಮಾಡಿದ್ದರು.
38 ತಿಂಗಳ ವೇತನ ಹಿಂಬಾಕಿ ವೇತನದ ಪಾವತಿ ಕುರಿತು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ತಾವುಗಳು ಈ ಹಿಂದಿನ ಸಭೆಗಳಲ್ಲಿ ತಿರುವಂತೆ ಕಂತಲೇ 14 ತಿಂಗಳ ಹಿಂಬಾಕಿ ವೇತನವನ್ನು ಡಿಸೆಂಬರ್- 2025ರ ಅಂತ್ಯದೊಳಗೆ ಪಾಟತಿಸಬೇಕು. ಉಳಿದ 24 ತಿಂಗಳ ಹಿಂಬಾಕಿಯನ್ನು ಹಂತ ಹಂತವಾಗಿ ಪಾವತಿಸಲು ಕ್ರಮವಹಿಸಬೇಕು. ಜತೆಗೆ 31.12.2023ರ ಮೂಲ ವೇತನ ಮತ್ತು ಶೇ.42.50ರ ಬಿಡಿಎ ಒಟ್ಟುಗೂಡಿಸಿ ಅದರ ಒಟ್ಟು ಮೊತ್ತಕ್ಕೆ ಶೇ.25ರಷ್ಟು ವೇತನ ಹೆಚ್ಚಿಸಿ 01.01.2024 ರಿಂದ ವೇತನ ಪರಿಷ್ಕರಣೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ, ಬಿಎಂಎಸ್ ಸಂಘಟನೆ ಪದಾಧಿಕಾರಿಗಳ ಮನವಿ ಸಚಿವರು ಸ್ಪಂದಿಸಿಲ್ಲ ಅಲ್ಲದೆ ಸಾರಿಗೆ ನೌಕರರು ಎಂದರೆ ಹೇಳುವಂತೆ ಕೇಳುವ ಮತ್ತು ಮಾಡುವವರು ಎಂದು ಭಾರಿ ಉದಾಸೀನತೆ ತೋರುತ್ತಿದ್ದಾರೆ. ಇದಕ್ಕೆಲ್ಲ ಇತರೆ ಸಂಘಟನೆ ಮುಖಂಡರ ಒಳ ಒಪ್ಪಂದವು ಇರಬಹುದು ಎಂದು ನೌಕರರು ಕೂಡ 14 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕದಿರುವುದಕ್ಕೆ ನೋವು ತೋಡಿಕೊಂಡಿದ್ದಾರೆ.
Related









