NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪುರ ಕೆಕೆಆರ್‌ಟಿಸಿ  : ನಾರಾಯಣಪ್ಪ ಕುರುಬರ ಮತ್ತೆ ಮರಳಿದರೆ ಸತ್ಯಕ್ಕೆ ಸೋಲಾಗುತ್ತದೆ, ಭ್ರಷ್ಟಾಚಾರಕ್ಕೆ ಗೆಲುವಾಗುತ್ತದೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಭ್ರಷ್ಟಾಚಾರ ಆರೋಪದಡಿ ವರ್ಗಾವಣೆ ಆಗಿರುವ ಅಧಿಕಾರಿ ಮತ್ತೆ ಅದೇ ಸ್ಥಳಕ್ಕೆ ಬರಲು ಸಚಿವರು ಶಾಸಕರಿಂದ ಶಿಫಾರಸು ಪತ್ರ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಭ್ರಷ್ಟಾಚಾರ ಆರೋಪದಡಿಯಲ್ಲಿ ವರ್ಗಾವಣೆ ಆಗಿ ಹೋಗಿರುವ ಭ್ರಷ್ಟ ಅಧಿಕಾರಿ ನಾರಾಯಣಪ್ಪ ಕುರುಬರ ಅವರು ಮತ್ತೆ ವಿಜಯಪುರ ವಿಭಾಗಕ್ಕೆ ಮರಳಿ ಬರಲು ಶಕ್ತಿಮಿರಿ ಪ್ರಯತ್ನ ಮಾಡುತ್ತಿದ್ದಾರೆ.

ಇವರನ್ನು ಮತ್ತೆ ವಿಜಯಪುರ ವಿಭಾಗಕ್ಕೆ ತರಲು ಕೆಲವು ಶಾಸಕರು ಹಾಗೂ ಸಚಿವರು ಶಿಫಾರಸು ಪತ್ರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮಾನ್ಯರೆ ಇವರು ಮರಳಿ ವಿಜಯಪುರ ವಿಭಾಗಕ್ಕೆ ಬಂದರೆ ಇನ್ನೂ ಹೆಚ್ಚಿನ ಭ್ರಷ್ಟಾಚಾರ ಮಾಡುತ್ತಾರೆ. ಇದು ಕಟ್ಟಿಟ್ಟ ಬುತ್ತಿ. ಈಗಾಗಲೇ ಇವರು ಇಲ್ಲಿ ಕೆಲಸ ಮಾಡಿ ಕೊಡುವುದಾಗಿ ಹೇಳಿ ಲಕ್ಷಗಟ್ಟಲೇ ಹಣ ತೆಗೆದುಕೊಡಿದ್ದಾರೆ.

ಇದನ್ನೂ ಓದಿ: ಲಂಚಾರೋಪ: ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಕರ್ತವ್ಯದಿಂದ ಬಿಡುಗಡೆ

ಈಗ ಕೆಲಸ ಮಾಡಿಕೊಡದ ಅಧಿಕಾರಿ ನಾರಾಯಣಪ್ಪ ಅವರನ್ನು ಹಣ ಮರಳಿ ಕೊಡಲು ಕೇಳಲು ಹೋದಾಗ ನಾನು ಮರಳಿ ಬಂದು ನಿಮ್ಮೆಲರ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದಾರಂತೆ.

ಮಾನ್ಯರೆ ಇವರೇನಾದರೂ ಮತ್ತೆ ವಿಜಯಪುರ ವಿಭಾಗಕ್ಕೆ ಬಂದರೆ ಭ್ರಷ್ಟಾಚಾರ ತಾಂಡವ ಆಡೋದು ಖಚಿತ. ಇವರು ಮರಳಿ ವಿಭಾಗಕ್ಕೆ ಬಂದರೆ ಸತ್ಯಕ್ಕೆ ಸೋಲಾಗುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಗೆಲುವು ಆಗುತ್ತದೆ.

ಇದನ್ನೂ ಓದಿ: “ವಿಜಯಪಥ” ವರದಿ ಪರಿಣಾಮ KKRTC- NEKRTC ನಾರಾಯಣಪ್ಪ ಕುರುಬರ ಹುದ್ದೆ ಮತ್ತೆ ಮಾರ್ಪಾಡು: ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನೇಮಕ

ತಮ್ಮ ಅಧಿಕಾರ ಇರುವ ವರೆಗೂ ತಾವು ಈ ಭ್ರಷ್ಟ ನಾರಾಯಣಪ್ಪ ಕುರುಬರ ಅಧಿಕಾರಿಯನ್ನು ಮತ್ತೆ ವಿಭಾಗಕ್ಕೆ ಆದೇಶ ಮಾಡುವುದಿಲ್ಲ ಎಂಬ ಅಪಾರವಾದ ನಂಬಿಕೆ ಇದೆ ಹಾಗೂ ಈ ನಂಬಿಕೆ ತಾವು ಕಾಪಾಡಿಕೊಂಡು ಹೋಗುತ್ತೀರಿ ಎಂದು ನಂಬಿರುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ ಅವರಿಗೆ ಈ ಮೂಲಕ ಭಾರತಿಯ ಜನತಾ ಪಕ್ಷ ಅಲ್ಪ ಸಂಖ್ಯಾತರ ಮೋರ್ಚಾದ ವಿಜಯಪುರ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಹುಂಡೇಕರ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಡಿಸಿ ನಾರಾಯಣಪ್ಪ ಕುರಬರ ಲಂಚಾವತಾರ : ಸಾಮಾಜಿಕ ಜಾಲತಾಣದಲ್ಲಿ ಭಾರಿ ಸೌಂಡ್‌

ಸಂಸ್ಥೆಯಲ್ಲಿ ದಕ್ಷ ಅಧಿಕಾರಿಯಾದ ನೀವು ಭ್ರಷ್ಟಾಚಾರಕ್ಕೆ ಆಸ್ಪದ ಕೊಡುವುದಿಲ್ಲ ಎಂಬ ಅಚಲವಾದ ನಂಬಿಕೆಯಿಂದ ವಿಜಯಪುರ ವಿಭಾಗದಲ್ಲಿ ಸಾವಿರಾರು ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಮತ್ತೆ ಇಂಥ ಅಧಿಕಾರಿಯನ್ನು ತಂದು ಕೂರಿಸಿದರೆ ಭ್ರಷ್ಟಾಚಾರ ಮತ್ತೆ ವಿಭಾಗದಲ್ಲಿ ಹೆಚ್ಚಾಗುತ್ತದೆ ಆದ್ದರಿಂದ ತಾವು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಿ ಯಾವುದೇ ಸಚಿವರು ಮತ್ತು ಶಾಸಕರ ಶಿಫಾರಸು ಪತ್ರಕ್ಕೆ ಮಣೆಹಾಕಬೇಡಿ ಎಂದು ಶಿವಯೋಗಿ ಕಳಸದ ಅವರಲ್ಲಿ ಹುಂಡೇಕರ್ ಮನವಿ ಮಾಡಿದ್ದಾರೆ.

 

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...