NEWSಕೃಷಿದೇಶ-ವಿದೇಶ

ಎಂಎಸ್‌ಪಿ ಸಮಿತಿ ವಿಸರ್ಜಿಸಿ ಸಾವಿರಾರು ಕಿಸಾನ್ ಪಂಚಾಯತ್‌ ರೈತರ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ‌ಎಂಎಸ್‌ಪಿ ಸಮಿತಿಯು ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಅದನ್ನು ವಿಸರ್ಜಿಸುವಂತೆ ಸಾವಿರಾರು ಕಿಸಾನ್ ಪಂಚಾಯತ್‌ ರೈತರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಸೋಮವಾರ ಸಾವಿರಾರು ರೈತರು ದಿಲ್ಲಿಯ ರಾಮ ಲೀಲಾ ಮೈದಾನದಲ್ಲಿ ಜಮಾಯಿಸಿದರು. ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದಂತೆ ನಡೆಯಲು 2,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. 2021ರ ಡಿಸೆಂಬರ್ 9ರಂದು ಮೋದಿಯವರ ಸರ್ಕಾರವು ನಮಗೆ ಲಿಖಿತ ರೂಪದಲ್ಲಿ ನೀಡಿದ ಆಶ್ವಾಸನೆಗಳನ್ನು ಕೂಡಲೆ ಈಡೇರಿಸುವಂತೆ ರೈತರ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸಿತು.

ಸಾಮಾನ್ಯ ಕನಿಷ್ಠ ದರ ಎಂಎಸ್‌ಪಿ ಬಗ್ಗೆ ಕಾನೂನು ಬದ್ಧತೆ ಕೋರಿ ಮತ್ತು ಎಂಎಸ್‌ಪಿ ಸಮಿತಿಯನ್ನು ವಿಸರ್ಜಿಸಲು ಆಗ್ರಹಿಸಿದ ರೈತರು, ಅನ್ನದಾತರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದನ್ನು ಸರಿಪಡಿಸಲು ಕೇಂದ್ರ ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಎಂಎಸ್‌ಪಿ ಸಮಿತಿಯು ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲವಾಗಿರುವುದರಿಂದ ಅದನ್ನು ವಿಸರ್ಜಿಸುವಂತೆ ರೈತರು ಒತ್ತಾಯಿಸಿದರು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಕೇಳಿದರು. ಪಿಂಚಣಿ, ಸಾಲ ಮನ್ನಾ, ರೈತರ ಪ್ರತಿಭಟನೆ ವೇಳೆ ಸಾವಿಗೀಡಾದದವರ ಕುಟುಂಬಗಳಿಗೆ ಪರಿಹಾರ, ವಿದ್ಯುತ್ ಶುಲ್ಕ ಮನ್ನಾ ಮೊದಲಾದ ಬೇಡಿಕೆಗಳನ್ನು ಸಹ ರೈತರು ಸರಕಾರದ ಮುಂದಿಟ್ಟರು.

ಜೆಪಿಸಿ- ಜಂಟಿ ಸಂಸದೀಯ ಸಮಿತಿಗೆ ವಹಿಸಿರುವ 2022ರ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು. ಸಂಯುಕ್ತ ಕಿಸಾನ್ ಮೋರ್ಚಾದ ಜೊತೆಗೆ ಮಾತನಾಡಿದ ಬಳಿಕವಷ್ಟೆ ಈ ಮಸೂದೆಯನ್ನು ಮಂಡಿಸುವುದಾಗಿ ರೈತರಿಗೆ ಬರೆದು ಕೊಟ್ಟು ವಂಚಿಸುತ್ತಿರುವುದೇಕೆ ಎಂದು ರೈತರು ಪ್ರಶ್ನಿಸಿದರು.

ಕೃಷಿಗೆ ಉಚಿತ ಮತ್ತು ಗ್ರಾಮೀಣ ಮನೆ ಬಳಕೆಗೆ 300 ಯೂನಿಟ್ ಶುಲ್ಕವಿಲ್ಲದೆ ಮಿಂಚುರಿ ಪೂರೈಸುವಂತೆಯೂ ಕೇಳಿದರು. 2021ರ ಡಿಸೆಂಬರ್ ನಲ್ಲಿ ಬರೆದು ಆಶ್ವಾಸನೆ ನೀಡಿದ ಬಳಿಕ ರೈತರು ಹೊಸ ರೈತರ ಕಾಯ್ದೆ ವಿರುದ್ಧದ ತಮ್ಮ ಚಳವಳಿ ಹಿಂದೆಗೆದುಕೊಂಡಿದ್ದರು. ಆಗ ಬರೆದುಕೊಟ್ಟಂತೆ ರೈತರ ಮೇಲಿನ ಮೊಕದ್ದಮೆ ಹಿಂದೆಗೆದುಕೊಳ್ಳುವುದು, ಎಂಎಸ್‌ಪಿಗೆ ಕಾನೂನು ರಕ್ಷಣೆ ಯಾವುದೂ ಆಗಿಲ್ಲ ಎಂದುಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೆಹಲಿ ಪೊಲೀಸರು ಟ್ರಾಫಿಕ್ ಸಂಚಾರ, ಸಭೆ ಮೊದಲಾದವನ್ನು ಲಿಖಿತ ರೂಪದಲ್ಲಿ ರೈತರಿಗೆ ನೀಡಿ ರೈತರಿಗೆ ಸೂಕ್ತ ರಕ್ಷಣೆ ನೀಡಿದ್ದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ