NEWSನಮ್ಮರಾಜ್ಯರಾಜಕೀಯ

ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ಜನಸಾಮಾನ್ಯರಿಗೆ ತೆರಿಗೆ ಹೊರೆ: ಕಾಂಗ್ರೆಸ್‌ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿ ಬೆಂಗಳೂರು ನಾಗರಿಕರ ಮೇಲೆ ಬಿಬಿಎಂಪಿ ಅನೇಕ ತೆರಿಗೆ ಹೊರೆ ಹೇರುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಹೊರಟು ಬಿಬಿಎಂಪಿಗೆ ಮುತ್ತಿಗೆ ಹಾಕಿದರು. ಈ ವೇಳೆ ಗೇಟ್‌ನಲ್ಲೇ ಪ್ರತಿಭಟನಾಕಾರರನ್ನು ಪೊಲೀಸರು. ತಡೆದು ಗೇಟ್‌ ಬಂದ್‌ ಮಾಡಲಾಯಿತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾನಿರತರು ಗೇಟ್‌ ಮೇಲೆ ಹತ್ತಲು ಯತ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಈ ವರ್ಷವನ್ನು ಹೋರಾಟದ ಮತ್ತು ಸಂಘಟನೆ ವರ್ಷ ಅಂತ ಕಾಂಗ್ರೆಸ್ ಘೋಷಣೆ ಮಾಡಿದೆ. ನಮ್ಮ ನಗರದಲ್ಲಿರೋ ಸಮಸ್ಯೆ ಮುಂದಿಟ್ಟುಕೊಂಡು ಪ್ರತೀ ಕ್ಷೇತ್ರದಲ್ಲಿ ಹೋರಾಟ ಮಾಡುತ್ತೇವೆ. ಮೊದಲು 150 ಕ್ಷೇತ್ರದಲ್ಲಿ ಹೋರಾಟ ಮಾಡೋ ಗುರಿ ಇದೆ. ಪ್ರತೀ ವಿಧಾನಸಭಾ ಕ್ಷೇತ್ರ, ಜನರ ಬಳಿ ಹೋಗಿ ಸಮಸ್ಯೆ ಆಲಿಸುತ್ತೇವೆ. ಬೆಂಗಳೂರು ನಗರದಲ್ಲಿರೋ ಜ್ವಲಂತ ಸಮಸ್ಯೆಗಳ ಆಲಿಸೋ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಕೇಳುತ್ತೇನೆ. ನೀವು ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದೀರಾ ಎಂದು ಕಿಡಿಕಾರಿದರು.

ರಾಜ್ಯ ಮತ್ತು ರಾಷ್ಟ್ರ ಸಂಪೂರ್ಣ ತತ್ತರಿಸಿದೆ. ಹಳ್ಳಿ ಜನರ ಬದುಕು ಹಸನು ಮಾಡುವುದು ಬೆಂಗಳೂರು ನಗರ. ಇಲ್ಲಿರೋ ಒಂದೂವರೆ ಕೋಟಿ ಜನರು, ರಾಜ್ಯದ ಮುಕ್ಕಾಲು ಭಾಗವನ್ನು ಸಾಕಿ ಸಲಹುತ್ತಿದೆ. ಇದು ಸ್ವಚ್ಛ, ಹಸಿರು ಬೆಂಗಳೂರು. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕೆಂಪೇಗೌಡರು ಕಟ್ಟಿರೋ ಈ ನಾಡಲ್ಲಿ ಎಲ್ಲಾ ಜಾತಿ, ಜನಾಂಗದವರಿದ್ದಾರೆ. ಆದ್ರೆ ನೀವು ಲಂಚಕೋರರು. ಕಚೇರಿ ಬಾಗಿಲು ಮುಟ್ಟಿದ್ರೆ ಒಂದು ರೇಟ್ ಫಿಕ್ಸ್ ಮಾಡಿದ್ದೀರಿ ಎಂದು ಹರಿಹಾಯ್ದರು.

ಒಬ್ಬ ರೋಗಿ ಆಚೆ ಬರಲು ಸಾಧ್ಯವಾಗಲಿಲ್ಲ. ನೀವು ಎಂತ ಸಚಿವರನ್ನು ಇಟ್ಟುಕೊಂಡಿದ್ದೀರಿ ಎಂದು ತೋರಿಸಲು ಕನ್ನಡಿಯನ್ನು ಇಡಬೇಕಾಗಿದೆ. ಹತ್ತು ಸಾವಿರ ಕೊಟ್ಟು ದಾಖಲಾಗೋ ಪರಿಸ್ಥಿತಿ ಬಂದಿದೆ. 800 ರೋಗಿಗಳಿಗೆ 10 ಸಾವಿರ ಬೆಡ್ ಮಾಡಿದ್ದೀರಾ. ಅದನ್ನು ಅಧಿಕಾರಿಗಳ ಮನೆಗೆ, ಸಚಿವರ ಮನೆಗೆ ಹಾಕಿಕೊಳ್ಳಲು ಹೇಳಿ. ಕೊರೊನಾ ಸಂದರ್ಭದಲ್ಲಿ ಯಾರಿಗೂ ವ್ಯಾಪಾರ ಇಲ್ಲ. ಲಾಕ್ ಡೌನ್, ಸೀಲ್ ಡೌನ್ ಮಾಡುವಂತೆ ಹೇಳಿದ್ದೀರಿ. ಜನರಿಗೆ ಉದ್ಯೋಗ ಇಲ್ಲ, ಬ್ಯಾಂಕ್ ಹಣ ಸಹಾಯ ಮಾಡೋದಾಗಿ ಹೇಳಿದ್ರಿ ಯಾರಿಗೂ ತಲುಪಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಡವರ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟಿನ್ ತಂದೋ. ಇಂದಿರಾ ಹೆಸರಿದೆ ಅನ್ನೋ ಕಾರಣಕ್ಕೆ ಆ ಯೋಜನೆಯನ್ನು ಮೂಲೆಗುಂಪು ಮಾಡಿದ್ದಾರೆ. ಎಲ್ಲಿ ಯಾವ ಮೂಲೆಗೋದ್ರೂ ರಸ್ತೆಗುಂಡಿಗಳು ಕಾಣುತ್ತಿವೆ. ಬಿಬಿಎಂಪಿಯಲ್ಲಿ ಜನ ಸಾಮಾನ್ಯರಿಗೆ ಸಿಗಬೇಕಿದ್ದ ಯಾವುದೇ ಯೋಜನೆ ಸಿಗುತ್ತಿಲ್ಲ. ಸ್ಟ್ರೀಟ್ ಲೈಟ್ ಮೇಂಟೆನೆನ್ಸ್ ಒಬ್ಬರಿಗೇ ಗುತ್ತಿಗೆ ನೀಡಿದ್ದು, ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಇಂದು ನಡೆಯುತ್ತಿರೋ ಪ್ರತಿಭಟನೆ ಒಂದೇ ದಿನಕ್ಕೆ ಸೀಮಿತವಾಗಿಲ್ಲ. ಪ್ರತೀ ವಲಯ, ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತೇವೆ ಎಂದರು.

ಬಿಬಿಎಂಪಿಯಲ್ಲಿ ಮತ್ತೆ ಚುನಾವಣೆ ನಡೆಯಬೇಕಿದೆ. ಹಿಂದೆ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 11 ಆಸ್ತಿ ಅಡಮಾನ ಇಟ್ಟಿದ್ರು. ಮೆಟ್ರೋ ಬೆಂಗಳೂರು ಅಂತ ಹೆಸರಿತ್ತು. ಇವರ ಆಡಳಿತ ವೈಫಲ್ಯದಿಂದ ಕಸ ಎತ್ತಿಲ್ಲ, ಕಾಮಗಾರಿ ನಡೆಯುತ್ತಿಲ್ಲ. ಕಂಟ್ರಾಕ್ಟರ್ ಗಳಿಗೆ ಮೂರು ಸಾವಿರ ಕೋಟಿ ರೂ. ಬಾಕಿ ನೀಡಬೇಕಿದೆ. ಹಣ ನೀಡದಿದ್ರೆ ಕೆಲಸ ಯಾವ ಕಂಟ್ರಾಕ್ಟರ್ ಮಾಡ್ತಾರೆ. ಕಟ್ಟಡ ನಿರ್ಮಾಣ ಪ್ಲಾನ್ ಮಂಜೂರು ಮಾಡಿಸಿಕೊಳ್ಳಲು ಹಣ ಹೆಚ್ಚು ಮಾಡಿದ್ದಾರೆ. 20×30 ಸೈಟಿಗೆ 2 ಲಕ್ಷ ರೂ. ಜಾಸ್ತಿ ಮಾಡಿದ್ದಾರೆ. ಇದೇ ರೀತಿ ಮುಂದುವರಿದ್ರೆ ಯಾರೂ ಮನೆ ಕಟ್ಟಲು ಸಾಧ್ಯ ಎಂದು ಹೇಳಿದರು.

ಕಾಂಗ್ರೆಸ್ ಹಕ್ಕೊತ್ತಾಯಗಳು

ಇಂದಿರಾ ಕ್ಯಾಂಟಿನ್ ಮುಂದುವರಿಸಬೇಕು
ಸಾರ್ವಜನಿಕರ ಶೌಚಾಲಯ ಸುಸುಜ್ಜಿತವಾಗಿರಬೇಕು
ಕಸ ಮುಕ್ತ, ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಬೇಕು
ಲಾಕ್‌ಡೌನ್‌ ವೇಳೆ ನಡೆದ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು
ಕೊರೋನಾದಿಂದ ನಿಧನರಾದ ಕುಟುಂಬಗಳಿಗೆ ಪರಿಹಾರ ನೀಡಬೇಕು
ಮಳೆಯಿಂದ ಆಗುತ್ತಿರುವ ಸಮಸ್ಯೆಗಳಿಗೆ ವಿಶೇಷ ಕಾರ್ಯಪಡೆ ಸ್ಥಾಪಿಸಬೇಕು
ಹೈದರಾಬಾದ್‌ ಪಾಲಿಕೆ ಮಾದರಿಯಲ್ಲಿ ಆಸ್ತಿ ತೆರಿಗೆ ವಿನಾಯಿತಿ
ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ದುಪ್ಪಟ್ಟು ವಸೂಲಿ ಶುಲ್ಕ ವಾಪಸ್
ಕಸದ ಮೇಲೆ ವಿಧಿಸಿರುವ ಸಸ್‌ 200ರೂ. ರದ್ದು ಮಾಡಬೇಕು
ರಸ್ತೆ ಸಾರಿಗೆಗೆ ವಿಧಿಸಿರುವ 2% ಟ್ಯಾಕ್ಸ್ ರದ್ದು ಮಾಡಬೇಕು
ಮೂರು ಸಾವಿರ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಬೇಕು

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ