NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಅಂಬಾರಿ ಉತ್ಸವ ಹೆಸರಿನ ಮಲ್ಟಿ ಆಕ್ಸೆಸ್ ಬಸ್‌ಗಳಿಗೆ ಸಿಎಂ ಚಾಲನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಒಟ್ಟು 50 ವೋಲ್ವೋ ಕಂಪನಿಯ 9600S ಮಲ್ಟಿ ಆಕ್ಸೆಸ್ ಬಸ್​ಗಳನ್ನು ಖರೀದಿ ಮಾಡಿದೆ. ಸದ್ಯ ಆ ಪೈಕಿ 20 ಬಸ್​ಗಳಿಗೆ ಇಂದು ಚಾಲನೆ ನೀಡಲಾಗಿದೆ.

ಇಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಿಗಮದ ಅಧ್ಯಕ್ಷ ಚಂದ್ರಪ್ಪ, ಈ ಮೂಲಕ ನಿಗಮವು ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಹೈಟೆಕ್ ಬಸ್ ಸೇವೆಯನ್ನು ನಾಡಿನ ಜನತೆಗೆ ಪರಿಚಯಿಸಿದೆ ಎಂದರು.

ಇನ್ನು ಸದ್ಯ ಈ ಪೈಕಿ 20 ಬಸ್​ಗಳಿಗೆ ಇಂದು (ಫೆ. 21) ಚಾಲನೆ ನೀಡಲಾಗಿದ್ದು ಮುಂದಿನ ಡಿಸೆಂಬರ್ ವೇಳೆಗೆ ಉಳಿದ 30 ಬಸ್​ಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ಸಂಸ್ಥೆ ಆರಂಭಿಸಿರುವ ಈ ಅತ್ಯಾಧುನಿಕ ಹೈಟೆಕ್ ಒಂದು ಬಸ್​ನ ಬೆಲೆ 1.70 ಕೋಟಿ ರೂ.ಗಳು! ವೋಲ್ವೋ ಕಂಪನಿ ತಯಾರಿಸಿರುವ ಈ ಬಸ್ ಇಡೀ ಭಾರತದಲ್ಲಿ ಯಾವ ಸರ್ಕಾರಿ, ಖಾಸಗಿ ನಿಗಮಗಳಲ್ಲಿಯೂ ಬಳಕೆಯಲ್ಲಿಲ್ಲ ಎಂಬುದು ವಿಶೇಷ ಎಂದು ವಿವರಿಸಿದರು.

ಈ ಹೊಸ ಬಸ್‌ಗಳಿಗೆ ನಿಗಮದಲ್ಲಿ ಅಂಬಾರಿ ಉತ್ಸವ ಎಂದು ಹೆಸರು ಇಡಲಾಗಿದೆ. 40 ಆಸನಗಳುಳ್ಳ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯದ ಬಸ್ ಇದಾಗಿದೆ. ಪಿಯು ಫೋಮ್ ಸ್ಲೀಪರ್ ಆಸನ ಜತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ಅಂಬಾರಿ ಉತ್ಸವ ವಾಹನವೇ ಆಗಿದೆ ಎಂದರೆ ತಪ್ಪಾಗಲ್ಲ ಎಂದು ತಿಳಿಸಿದರು.

ರೈಲು ಮಾದರಿಯಲ್ಲಿಯೇ ಬಸ್ಸಿನ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್‌ಗಳು ದೂರ ಪ್ರಯಾಣಕ್ಕೆ ಬಹಳ ಅನುಕೂಲವಾಗಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಬಸ್ಸಿನಲ್ಲಿ ಸಿಗಲಿದೆ. ಈ ಬಸ್ಸುಗಳಿಗೆ ಪಡೆ ಅಂತ ನಾನು ಕರೆಯುತ್ತೇನೆ “ಎಂದು ಈ ಬಸ್​ಗಳಿಗೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.

ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಈ ಅಂಬಾರಿ ಉತ್ಸವ ಬಸ್ ಒಳಗೊಂಡಿದೆ. ಜತೆಗೆ 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 9600s ಮಾದರಿಯಲ್ಲಿ ಕವಚ ಜತೆಗೆ ಸುಧಾರಿತ ಅಬ್ಸರ್ವರ್ ಸಹ ಅಂಬಾರಿ ಉತ್ಸವ ಬಸ್​ಗಳಿಗೆ ಇರಲಿದೆ ಎಂದು ತಿಳಿಸಿದರು.

Leave a Reply

error: Content is protected !!
LATEST
160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್