NEWSನಮ್ಮಜಿಲ್ಲೆನಮ್ಮರಾಜ್ಯಸಿನಿಪಥ

ಜಮೀನಿನ ರಸ್ತೆ ವಿಷಯ: ತಿಮ್ಮಲಾಪುರ ಗ್ರಾಮಸ್ಥರು- ನಟ ಯಶ್ ಪೋಷಕರ ನಡುವೆ ಘರ್ಷಣೆ ಸುಖಾಂತ್ಯ?

ಕೃಷಿ ಉದ್ದೇಶಕ್ಕೆ ತೆದುಕೊಂಡಿರುವ ಜಮೀನು: ಜನರಿಗೆ ತೊಂದರೆ ಆಗಲು ಬಿಡೋಲ್ಲ ಎಂದ ಯಶ್‌

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಹಾಸನ: ಜಿಲ್ಲೆಯ ತಿಮ್ಮಲಾಪುರದಲ್ಲಿ ತೆಗೆದುಕೊಂಡಿರುವ ಜಮೀನಿನಲ್ಲಿನ ರಸ್ತೆ ವಿಷಯವಾಗಿ ಗ್ರಾಮಸ್ಥರು ಮತ್ತು ಯಶ್ ಅವರ ಪೋಷಕರ ನಡುವೆ ಸೋಮವಾರ ನಡೆದ ಘರ್ಷಣೆ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ದುದ್ದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿದರು. ನಂತರ ತಮ್ಮವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೃಷಿ ಮಾಡುವ ದೃಷ್ಟಿಯಿಂದ ಭೂಮಿ ಖರೀದಿಸಿದ್ದೇವೆ. ಈಗ ಅದಕ್ಕೆ ಬೇಲಿ ಹಾಕಿ ಭದ್ರಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಗ್ರಾಮಸ್ಥರು ನೀವು ಬೇಲಿ ಹಾಕಬೇಡಿ. ನಾವು ತಿರುಗಾಡುವುದಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿ ಪೊಲೀಸ್‌ ಠಾಣೆ ಮಟ್ಟಿಲೇರಿದೆ.

ಈಹೀಗಾಗಿ ನಾನು ಆ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದು, ಆ ಸಮಸ್ಯೆಯನ್ನು ಗ್ರಾಮಸ್ಥರ ಮಧ್ಯೆಯೇ ಬಗೆಹರಿಸುತ್ತೇನೆ. ಗ್ರಾಮಸ್ಥರಿಗೆ ತೊಂದರೆ ಆಗದ ರೀತಿ ನಾನು ನೋಡಿಕೊಳ್ಳುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಇನ್ನು ಗ್ರಾಮದ ಕೆಲವರು ಮತ್ತು ನಮ್ಮ ತಂದೆ-ತಾಯಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕಾರಣ ಇಬ್ಬರು ಗ್ರಾಮೀಣರೆ ಅದರ ಬಗ್ಗೆ ನಾವು ಹೆಚ್ಚು ಕೆದಕಿ ದೊಡ್ಡದು ಮಾಡುವ ಬದಲು ಯಾವ ರೀತಿ ಒಳ್ಳೆಯದನ್ನು ಮಾಡಬೇಕು ಎಂಬುದರ ಕಡೆ ಗಮನಕೊಡೋಣ ಎಂದು ಹೇಳಿದರು.

ಇನ್ನು ಜನರಿಗೆ ತೊಂದರೆ ಕೊಟ್ಟು ಆ ಜಮೀನಿನಲ್ಲಿ ಕೃಷಿ ಮಾಡುವ ಆಸೆ ಇಲ್ಲ. ಜನರಿಗೆ ಒಳ್ಳೆಯದಾಗುವ ರೀತಿಯಲ್ಲಿ ಆ ಜಮೀನಿನಲ್ಲಿ ಗ್ರಾಮೀಣರ ಅದರಲ್ಲೂ ಬಡವರಿಗೆ ಒಳ್ಳೆಯದಾಗುವ ದೃಷ್ಟಿಯಲ್ಲೇ ವ್ಯವಸಾಯ ಮಾಡುವಂತೆ ನಮ್ಮ ಹುಡುಗರಿಗೆ ತಿಳಿಸುತ್ತೇನೆ. ಜತೆಗೆ ಯಾರಿಗೂ ತೊಂದರೆ ಕೊಡುವ ಮನಸ್ಥಿತಿಯವನು ನಾನಲ್ಲ ನಾನು ಜನರಿಗೆ ಒಳ್ಳೆಯದನ್ನೇ ಮಾಡಬೇಕು ಎಂದು ಬಯಸುವವನು ಎಂದು ಹೇಳಿದರು.

ಇನ್ನು ಮಾಧ್ಯಮಗಳಿಗೂ ಮನವಿ ಮಾಡಿದ ಅವರು ಸುಖಸುಮ್ಮನೆ ಏನೋ ಯಶ್‌ ಮಾಡಿಬಿಟ್ಟಿದ್ದಾರೆ. ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಚಾರ ಮಾಡಬೇಡಿ. ವಾಸ್ತವ ಸ್ಥಿತಿಯನ್ನು ತಿಳಿದು ವರದಿ ಮಾಡಿ. ಜನರಿಗೆ ಸತ್ಯ ತಿಳಿಸಿ ಎಂದು ಹೇಳಿದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ