ಬಾಡಿಗೆದಾರರಿಗೆ ಗೃಹಜ್ಯೋತಿ’ ತಂದ ಟೆನ್ಷನ್: ಇನ್ನು ಮುಂದೆ ಸಿಗಲ್ವಾ ಫ್ರೀ ಕರೆಂಟ್?
ದಾಖಲೆ ಇಲ್ಲದಿದ್ರೆ ಫ್ರೀ ಕರೆಂಟ್ ಇಲ್ಲ: ಬಾಡಿಗೆಗೆ ಇರುವವರು ಸರಿಯಾದ ದಾಖಲೆ ನೀಡದಿದ್ದರೆ ತಾಂತ್ರಿಕ ಕಾರಣದಿಂದಾಗಿ ನಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಕಡಿತ ಆಗಬಹುದು ಎಂದು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿರುವ ಬಾಡಿಗೆದಾರ ನಿವಾಸಿಗಳು ಟೆನ್ಷನ್ ಆಗಿದ್ದಾರೆ. ಇದಕ್ಕೆ ಸರ್ಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳ ಒಂದಾದ ‘ಗೃಹಜ್ಯೋತಿ’ (Gruha Jyothi)ಗೆ ಈಗ ಸರ್ಜರಿ ಮಾಡುತ್ತಿದ್ದು, ಈ ಪರಿಷ್ಕರಣೆಗಾಗಿ ಲಾನುಭವಿಗಳ ಮನೆ-ಮನೆಗೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಸಿಬ್ಬಂದಿ ಜುಲೈ 1ರಿಂದ ದಾಖಲೆಗಳ ಪರಿಶೀಲನೆ ನಡೆದುತ್ತಿದ್ದು ಈ ಕಾರ್ಯ ಸುಮಾರು 2 ತಿಂಗಳ ಕಾಲ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಆದರೆ, ಈಗ ಶುರುವಾಗಿರುವ ಟೆನ್ಷನ್ ಎಂದರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಬಾಡಿಗೆದಾರರಿಗೆ ಉಚಿತ ಕರೆಂಟ್ ಕೊಡುವುದಿಲ್ಲವಾ ಇದು ಮುಂದಿನ ದಿನಗಳಲ್ಲಿ ಕೈ ತಪ್ಪುತ್ತದೆಯೇ ಎಂಬ ಭೀತಿ ಕಾಡುತ್ತಿದೆ.
ಪ್ರತಿ ಮನೆಗೂ 200 ಯೂನಿಟ್ ಉಚಿತ ಕರೆಂಟ್ ನೀಡುವ ಯೋಜನೆ ಗೃಹಜ್ಯೋತಿಯಿಂದ ಆನೇಕರು ವಾಣಿಜ್ಯ ಕಟ್ಟಡಕ್ಕೂ ಫ್ರೀ ಕರೆಂಟ್ ಸೌಲಭ್ಯ ಪಡೆದಿದ್ದಾರೆ ಎನ್ನುವ ಆರೋಪವಿದೆ. ಹೀಗಾಗಿ ಪರಿಷ್ಕರಣೆ ನಡೆಯುತ್ತಿದೆ. ಈ ನಡುವೆ ಈಗ ಬಾಡಿಗೆದಾರರಿಗೆ ಉಚಿತ ಕರೆಂಟ್ ಕೈ ತಪ್ಪುವ ತೀವ್ರ ಆತಂಕ ಶುರುವಾಗಿದೆ.
ದಾಖಲೆಗಳು ಇಲ್ಲದಿದ್ದರೆ ಕಷ್ಟ-ಕಷ್ಟ: ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸುತ್ತಿರುವ ಈ ಮನೆ ಮನೆ ತಪಾಸಣೆಯ ವೇಳೆ ಪ್ರಮುಖ ದಾಖಲೆ ನೀಡಬೇಕಿದೆ. ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಗುರುತಿನ ಚೀಟಿ (Voter ID), ಆಧಾರ್ ದಾಖಲೆ ಹಾಗೂ ಮನೆಗೆ ಸಂಬಂಧಿಸಿದ ಬಾಡಿಗೆ ಪತ್ರಗಳನ್ನು ಕಡ್ಡಾಯವಾಗಿ ಸಿಬ್ಬಂದಿಗೆ ತೋರಿಸಬೇಕಿದೆ. ಒಂದು ವೇಳೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಈಗ ಟೆನ್ಷನ್ ಕೊಡುತ್ತಿದೆ ಸರ್ಕಾರ.
ಇನ್ನು ಹೊಸದಾಗಿ ಬಾಡಿಗೆಗೆ ಹೋಗಿರೋಗೆ ಕರೆಂಟ್ ಕಟ್!: ಜುಲೈ 2023ರ ನಂತರ ಹೊಸದಾಗಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿರುವ ಬಾಡಿಗೆದಾರರಿಗೆ ಈ ಗೃಹಜ್ಯೋತಿಪರಿಷ್ಕರಣೆ ಆತಂಕ ಮೂಡಿಸಿದೆ. ಏಕೆಂದರೆ ಅನೇಕ ಬಾಡಿಗೆದಾರರು ತಮಗಿಂತ ಮುಂಚೆ ಆ ಮನೆಯಲ್ಲಿದ್ದ ಹಳೆಯ ಫಲಾನುಭವಿಗಳ ಹೆಸರಿನಲ್ಲೇ ಗೃಹಜ್ಯೋತಿ ಸೌಲಭ್ಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರು ಹೀಗೆ ಮಾಡುವುದಕ್ಕೂ ಕಾರಣ ಇದೆ.
ಈ ಹಿಂದೆ ಬಾಡಿಗೆಗೆ ಇದ್ದ ಬಾಡಿಗೆದಾರರು ತಮ್ಮ ಗೃಹಜ್ಯೋತಿಗೆ ನೀಡಿದ್ದ ಆಧಾರ್ಅನ್ನು ರದ್ದು ಮಾಡಿಕೊಂಡಿಲ್ಲ. ಹೀಗಾಗಿ ಹೊಸದಾಗಿ ಬಾಡಿಗೆಗೆ ಬಂದವರು ತಮ್ಮ ಆಧಾರ್ ಲಿಂಕ್ ಮಾಡಿಕೊಂಡು ಫ್ರೀ ಕರೆಂಟ್ ಪಡೆಯುವುದಕ್ಕೆ ಅವಖಾಶ ಸಿಗುತ್ತಿಲ್ಲ. ಹಿಂದೆ ಇದ್ದವರು ರದ್ದು ಮಾಡಿಕೊಂಡರೆ ಹೊಸದಾಗಿ ಬಂದಿರುವರು ನೋಂದಾಯಿಸಿಕೊಳ್ಳಲು ಸಾಧ್ಯ ಇಲ್ಲದಿದ್ದರೆ ಆಗುವುದಿಲ್ಲ ಎಂದು ಬೆಸ್ಕಾಂ ಸಿಬ್ಬಂದಿಯೇ ಹೇಳುತ್ತಿದ್ದಾರೆ. ಹೀಗಿದ್ದರೆ ಏನು ಮಾಡಬೇಕು ಎಂದು ಸರ್ಕಾರ ಒಂದು ನಿರ್ಧಾರ ಪ್ರಕಟಿಸಬೇಕು ಎಂದು ಹೊಸದಾಗಿ ಬಾಡಿಗೆಗೆ ಹೋಗುತ್ತಿರುವವರು ಒತ್ತಾಯಿಸಿದ್ದಾರೆ.
ದಾಖಲೆ ಇಲ್ಲದಿದ್ರೆ ಫ್ರೀ ಕರೆಂಟ್ ಇಲ್ಲ: ಬಾಡಿಗೆಗೆ ಇರುವವರು ಸರಿಯಾದ ದಾಖಲೆ ನೀಡದಿದ್ದರೆ ತಾಂತ್ರಿಕ ಕಾರಣದಿಂದಾಗಿ ನಮಗೆ ಸಿಗುತ್ತಿದ್ದ ಉಚಿತ ವಿದ್ಯುತ್ ಕಡಿತ ಆಗಬಹುದು ಎಂದು ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿರುವ ಬಾಡಿಗೆದಾರ ನಿವಾಸಿಗಳು ಟೆನ್ಷನ್ ಆಗಿದ್ದಾರೆ. ಇದಕ್ಕೆ ಸರ್ಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನಿಧನರಾದವರ ಹೆಸರಲ್ಲಿದ್ರೂ ಫ್ರೀ ಕರೆಂಟ್ ಕಟ್?: ಕೇವಲ ಬಾಡಿಗೆದಾರರು ಮಾತ್ರವಲ್ಲದೆ, ಸ್ವಂತ ಮನೆ ಹೊಂದಿರುವವರಿಗೆ ಪರಿಷ್ಕರಣೆ ಬಿಸಿ ತಟ್ಟಲಿದೆ. ಮನೆ ಮಾಲೀಕ ನಿಧನರಾಗಿದ್ದು ಇನ್ನು ಅವರ ಹೆಸರಲ್ಲೇ ಅರ್ಜಿ ಸಲ್ಲಿಸಿ ಉಚಿತ ಕರೆಂಟ್ ಪಡೆಯುತ್ತಿದ್ದರೆ ಅದನ್ನು ಕಟ್ ಮಾಡಲು ಮುಂದಾಗುತ್ತಿದೆ. ಹೀಗಾಗಿ ಈಗ ಖಾತೆಯನ್ನು ಬದಲಿಸಿ ಮತ್ತೊಬ್ಬರ ಹೆಸರಿಗೆ ಲಿಂಕ್ ಮಾಡಿಸುವುದು ಹೇಗೆ ಅನ್ನೋ ಟೆನ್ಷನ್ ಜನರಲ್ಲಿ ಹೆಚ್ಚಾಗುತ್ತಿದೆ.
ಸರ್ವೆ ಸಮಯದಲ್ಲಿ ಕೇಳಲಾಗುವ ಪ್ರಶ್ನೆ ಏನು?: 1. ವಿದ್ಯುತ್ ಸರಬರಾಜು ಕಂಪನಿಯ ಹೆಸರು. 2. ವಿದ್ಯುತ್ ಬಿಲ್ ಖಾತೆ ಸಂಖ್ಯೆ. 3. ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು. 4. ಫಲಾನುಭವಿ ಆಧಾರ್ ಸಂಖ್ಯೆ. 5. ಗೃಹಜ್ಯೋತಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆ. 6. ಬಾಡಿಗೆ ಅಥವಾ ಸ್ವಂತ ಮನೆಯ ವಿವರ 7. ಪಡಿತರ ಚೀಟಿ ವಿವರ. 8. ಫಲಾನುಭವಿಯ ಎಪಿಕ್ ಕಾರ್ಡ್ ಸಂಖ್ಯೆ. 9. ಜಾತಿ ವಿವರ. 10. ತೆರಿಗೆಯ ವಿವರ. 11.ಫಲಾನುಭಿಯ ವೃತ್ತಿ ಏನು ಎಂಬ ಇಷ್ಟು ವಿವರಗಳನ್ನು ನೀಡಬೇಕಿದೆ.
ಒಟ್ಟಾರೆ ಸರ್ಕಾರ ಗ್ರಹಜ್ಯೋತಿ ಫಲಾನುಭವಿಗಳಿಗೆ ನಾನಾ ರೀತಿಯ ಟೆನ್ಷನ್ಕೊಟ್ಟು ಪರಿಷ್ಕರಣೆ ಮಾಡುವುದಕ್ಕೆ ಮುಂದಾಗಿದ್ದು, ಈಗಾಗಲೇ ಅದರ ಕಾರ್ಯವೂ ಕಳೆದ ಮೂರು ದಿನಗಳಿಂದ ಅಂದರೆ ಜುಲೈ 1ರಿಂದ ನಡೆಯುತ್ತಿದೆ. ಇನ್ನು ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.







